ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾ ಕುಂದಾಪುರಳನ್ನು ಸ್ಟಾರ್ ಪ್ರಚಾರಕಿಯಾಗಿ ಬಳಿಸಿತ್ತು: ಪ್ರಿಯಾಂಕ್ ಖರ್ಗೆ

ಸಿಟಿ ರವಿ, ಚೈತ್ರಾ ಮತ್ತು ಬಿಜೆಪಿ ನಡುವೆ ಸಂಬಂಧವಿಲ್ಲ ಅಂತ ಹೇಳುತ್ತಾರೆ, ಈಗ ಹೇಳಿದರೇನು ಬಂತು? ಪ್ರಚಾರಕ್ಕಾಗಿ ಅಕೆಯನ್ನು ಬಳಸಿಕೊಳ್ಳುವಾಗ ಗೊತ್ತಾಗಲಿಲ್ಲವೇ? ಬಿಜೆಪಿ ನಾಯಕರೇ ಹಾಗೆ; ಮೊದಲು ಬಳಸಿಕೊಳ್ಳುತ್ತಾರೆ ನಂತರ ಇಂಥ ಘಟನೆ ಬಳಕಿಗೆ ಬಂದಾಗ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾ ಕುಂದಾಪುರಳನ್ನು ಸ್ಟಾರ್ ಪ್ರಚಾರಕಿಯಾಗಿ ಬಳಿಸಿತ್ತು: ಪ್ರಿಯಾಂಕ್ ಖರ್ಗೆ
|

Updated on: Sep 16, 2023 | 4:23 PM

ಕಲಬುರಗಿ: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಚೈತ್ರಾ ಕುಂದಾಪುರ (Chaitra Kundapura) ಇಂದಿರಾ ಕಾಂಟೀನ್ ಬಿಲ್ ಗೆ ಸಂಬಂಧಿಸಿದಂತೆ ಷಡ್ಯಂತ್ರ ರಚಿಸಲಾಗಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಆ ವಿಷಯವೆಲ್ಲ ಗೊತ್ತಿಲ್ಲ, ಎಫ್ ಐಆರ್ ನಲ್ಲಿ ಇರೋದು ಮಾತ್ರ ಗೊತ್ತು ಅಂತ ಹೇಳಿದರು. ಚುನಾವಣೆಗೆ ಟಿಕೆಟ್ ಮಾರಾಟ ಮಾಡುವವರಿಗೆ, ಮೋಸ ಮಾಡುವವರಿಗೆ ಕುಮಾರ ಕೃಪಾದಿಂದಲೇ (Kumara Krupa) ಕಾರ್ಯಾಚರಣೆ ನಡೆಸುವ ಅವಕಾಶ ಹೇಗೆ ಸಿಕ್ಕಿತು ಅಂತ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ವಿಧಾ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾಳಂಥವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿತು, ಆರಗ ಜ್ಞಾನೇಂದ್ರ ಅವರ ಕ್ಷೇತ್ರ, ಶೃಂಗೇರಿಯಲ್ಲಿ ಚೈತ್ರಾ ಪ್ರಚಾರ ಮಾಡಿದ್ದಾಳೆ ಎಂದರು. ಸಿಟಿ ರವಿ, ಚೈತ್ರಾ ಮತ್ತು ಬಿಜೆಪಿ ನಡುವೆ ಸಂಬಂಧವಿಲ್ಲ ಅಂತ ಹೇಳುತ್ತಾರೆ, ಈಗ ಹೇಳಿದರೇನು ಬಂತು? ಪ್ರಚಾರಕ್ಕಾಗಿ ಅಕೆಯನ್ನು ಬಳಸಿಕೊಳ್ಳುವಾಗ ಗೊತ್ತಾಗಲಿಲ್ಲವೇ? ಬಿಜೆಪಿ ನಾಯಕರೇ ಹಾಗೆ; ಮೊದಲು ಬಳಸಿಕೊಳ್ಳುತ್ತಾರೆ ನಂತರ ಇಂಥ ಘಟನೆ ಬಳಕಿಗೆ ಬಂದಾಗ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us