AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ವಿವಾದ; ಹಿರಿಯ ನಟ ಅನಂತ್ ನಾಗ್ ಫುಲ್ ಗರಂ, ಇಲ್ಲಿದೆ ವಿಡಿಯೋ

ಕಾವೇರಿ ವಿವಾದ; ಹಿರಿಯ ನಟ ಅನಂತ್ ನಾಗ್ ಫುಲ್ ಗರಂ, ಇಲ್ಲಿದೆ ವಿಡಿಯೋ

Malatesh Jaggin
| Edited By: |

Updated on: Sep 20, 2023 | 9:37 PM

Share

ಡಿಎಂಕೆ ಜೊತೆ ಮಾತನಾಡಿ ಕಾಂಗ್ರೆಸ್ ಕಾವೇರಿ ವಿವಾದ ಬಗೆಹರಿಸಿಲ್ಲ ಎಂದು ಬೆಂಗಳೂರಿನಲ್ಲಿ ಸ್ಯಾಂಡಲ್​ವುಡ್ ಹಿರಿಯ ನಟ ಅನಂತನಾಗ್(AnanthNag) ಕಿಡಿಕಾರಿದ್ದಾರೆ. ಬ್ರಿಟಿಷರ ಆಳ್ವಿಕೆ ಇದ್ದಾಗ ತಮಿಳುನಾಡಿಗೆ ಹೆಚ್ಚು ನೀರು ಬಿಡುವ ಉಲ್ಲೇಖವಾಗಿತ್ತು. ಇದನ್ನು ಸರಿಮಾಡುವ ಕೆಲಸ ಆಗಲೇ ಇಲ್ಲ ಎಂದಿದ್ದಾರೆ.

ಬೆಂಗಳೂರು, ಸೆ.20: ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶ ವಿಚಾರ ‘ಕಳೆದ 60 ವರ್ಷಗಳಿಂದಲೂ ಕಾವೇರಿ ಗಲಾಟೆ ನೋಡುತ್ತಾ ಬಂದಿದ್ದೇವೆ. ಡಿಎಂಕೆ ಜೊತೆ ಮಾತನಾಡಿ ಕಾಂಗ್ರೆಸ್ ಕಾವೇರಿ ವಿವಾದ ಬಗೆಹರಿಸಿಲ್ಲ ಎಂದು ಬೆಂಗಳೂರಿನಲ್ಲಿ ಸ್ಯಾಂಡಲ್​ವುಡ್ ಹಿರಿಯ ನಟ ಅನಂತನಾಗ್(AnanthNag) ಕಿಡಿಕಾರಿದ್ದಾರೆ. ಬ್ರಿಟಿಷರ ಆಳ್ವಿಕೆ ಇದ್ದಾಗ ತಮಿಳುನಾಡಿಗೆ ಹೆಚ್ಚು ನೀರು ಬಿಡುವ ಉಲ್ಲೇಖವಾಗಿತ್ತು. ಇದನ್ನು ಸರಿಮಾಡುವ ಕೆಲಸ ಆಗಲೇ ಇಲ್ಲ. ಕಾವೇರಿ ನೀರಿನ ವಿಚಾರವಾಗಿ 15 ವರ್ಷಗಳಿಂದ ಗಲಾಟೆ ಹೆಚ್ಚಾಗಿದೆ. ಇದು ತಮಿಳುನಾಡಿನ ಡಿಎಂಕೆ ಪಾರ್ಟಿ ಮಾಡುತ್ತಿರುವ ಸಮಸ್ಯೆ. ನಾವೆಲ್ಲರೂ ಕನ್ನಡಿಗರು, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು. ಅವರು ಕರ್ನಾಟಕವನ್ನ ಪಾಕಿಸ್ತಾನ ಅಥವಾ ಶ್ರೀಲಂಕಾ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ