AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆದಷ್ಟೂ ಬಯಲಾಗ್ತಿದೆ ಚಾಮರಾಜನಗರದ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!

ಬಗೆದಷ್ಟೂ ಬಯಲಾಗ್ತಿದೆ ಚಾಮರಾಜನಗರದ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 25, 2026 | 12:08 PM

Share

ಚಾಮರಾಜನಗರ ಎನ್‌ಕೌಂಟರ್ ಪ್ರಕರಣದ ನಂತರ ಮರಿ ವೀರಪ್ಪನ್ ಅಲಿಯಾಸ್ ಗೋವಿಂದನ ಕರಾಳ ಮುಖ ಬಯಲಾಗಿದೆ. ವೀರಪ್ಪನ್‌ನ ಹಾರ್ಡ್‌ಕೋರ್ ಅಭಿಮಾನಿಯಾಗಿರುವ ಈತ, ಪ್ರತಿಭಟನೆಗಳ ಸಂದರ್ಭದಲ್ಲಿ ಜನರನ್ನು ಕೆರಳಿಸಿದ್ದ. ಈತನ ವಿರುದ್ಧ ಬೇಟೆ, ಮಹಿಳೆ ಮೇಲೆ ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳಿದ್ದು, ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರು ಬಂಧಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಚಾಮರಾಜನಗರ, ಆಗಸ್ಟ್​​ 25: ಹನೂರು ಕಾಡಿನಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣದ ನಂತರ ಮರಿ ವೀರಪ್ಪನ್ ಅಲಿಯಾಸ್ ಗೋವಿಂದನ ಕರಾಳ ಮುಖ ಬಯಲಾಗುತ್ತಿದೆ. ವೀರಪ್ಪನ್‌ನ ಕಟ್ಟಾ ಅಭಿಮಾನಿಯಾಗಿರುವ ಈತ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ತಾನು ವೀರಪ್ಪನ್ ರೀತಿ ಬಿಂಬಿಸಿಕೊಳ್ಳುತ್ತಿದ್ದು, ಎನ್‌ಕೌಂಟರ್ ನಂತರ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ, ಗೋವಿಂದ ಕುಡಿದು ಬಂದು ಅರಣ್ಯ ಕಚೇರಿಗೆ ನುಗ್ಗುವಂತೆ ಜನರನ್ನು ಪ್ರಚೋದಿಸಿದ್ದ ವಿಡಿಯೋ ಕೂಡ ವೈರಲ್​​ ಆಗಿತ್ತು. ಈತನ ವಿರುದ್ಧ ಈಗಾಗಲೇ ಒಂಬತ್ತು ಪ್ರಕರಣಗಳಿದ್ದು, ಹುಲಿ ಬೇಟೆ, ಜಿಂಕೆ ಮಾಂಸ ಸಾಗಾಣಿಕೆ ಸೇರಿದಂತೆ ಹಲವು ಆರೋಪಗಳಿವೆ. ಇಷ್ಟಲ್ಲದೆ, ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಟ್ಟೆ ಹರಿದು ಥಳಿಸಿದ್ದಾನೆ ಎಂಬ ದೂರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಎಫ್‌ಐಆರ್ ಕೂಡ ಆಗಿದೆ. ಹೀಗಿದ್ದರೂ ಈತನನ್ನು ಇದುವರೆಗೂ ಬಂಧಿಸದ ಪೊಲೀಸರ ನಡೆ ಬಗ್ಗೆಯೇ ಈಗ ಅನುಮಾನಗಳು ವ್ಯಕ್ತವಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us