AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರ ಸರ್ಕಾರ ಎರಡು ವರ್ಷಗಳಿಂದ ಸುಭದ್ರವಾಗಿದೆ: ಶಿವಲಿಂಗೇಗೌಡ

ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರ ಸರ್ಕಾರ ಎರಡು ವರ್ಷಗಳಿಂದ ಸುಭದ್ರವಾಗಿದೆ: ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2025 | 5:24 PM

Share

ಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡ ಶಿವಲಿಂಗೇಗೌಡ, ಮಂತ್ರಿ ಮಾಡುವ ಭರವಸೆ ನೀಡಿಯೇ ಸಿದ್ದರಾಮಯ್ಯನವರು ತನ್ನನ್ನು ಜೆಡಿಎಸ್ ನಿಂದ ಕಾಂಗ್ರೆಸ್​ಗೆ ಕರೆತಂದಿದ್ದಾರೆ, ಮಂತ್ರಿಸ್ಥಾನ ನೀಡುವ ಆಶ್ವಾಸನೆಯನ್ನು ಪದೇಪದೆ ನೀಡುತ್ತಿದ್ದಾರೆ, ಎರಡೂವರೆ ವರ್ಷಗಳ ನಂತರ ಮಂತ್ರಿಮಂಡಳದ ಪುನಾರಚನೆಯಾದಾಗ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದರು.

ಹಾಸನ, ಮೇ 16: ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಕೆಎಂ ಶಿವಲಿಂಗೇಗೌಡ, ಆರ್ಥಿಕ ತಜ್ಞರಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah) ಎರಡು ವರ್ಷಗಳಿಂದ ಸುಭದ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ, ಬಡವರ ಮನೆಗಳಿಗೆ ಬೇರೆ ಬೇರೆ ಯೋಜನೆಗಳ ಮೂಲಕ ಪ್ರತಿ ತಿಂಳು ₹ 5,000 ತಲುಪಿಸುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ, ವಿರೋಧ ಪಕ್ಷಗಳು ಅವರನ್ನು ಟೀಕಿಸುತ್ತಿವೆ, ಯಾರೇನೇ ಕಾಮೆಂಟ್ ಮಾಡಿದರೂ ಅವರನ್ನು ಏನೂ ಮಾಡಕ್ಕಾಗಲ್ಲ, ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳಬಹುದು ಎಂದು ಹೇಳಿದರು.

ಇದನ್ನೂ ಓದಿ:  ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯವಾಗದಿದ್ರೆ ರಾಜ್ಯ ರೆವಿನ್ಯೂ ಸರ್ಪ್ಲಸ್ ಒಳಗಡೆ ಬರಬಹುದು: ಶಿವಲಿಂಗೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ