Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಹೀಲ್ ಚೇರ್​​ನಲ್ಲಿ ಆಗಮಿಸಿ ಕರ್ನಾಟಕ ಇಂಟರ್​ನ್ಯಾಷನಲ್ ಟ್ರಾವೆಲ್ ಎಕ್ಸ್​ಪೋಗೆ ಚಾಲನೆ ನೀಡಿದ ಸಿದ್ದರಾಮಯ್ಯ

ವ್ಹೀಲ್ ಚೇರ್​​ನಲ್ಲಿ ಆಗಮಿಸಿ ಕರ್ನಾಟಕ ಇಂಟರ್​ನ್ಯಾಷನಲ್ ಟ್ರಾವೆಲ್ ಎಕ್ಸ್​ಪೋಗೆ ಚಾಲನೆ ನೀಡಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 26, 2025 | 9:14 PM

ಕರ್ನಾಟಕ ಇಂಟರ್​ನ್ಯಾಷನಲ್ ಟ್ರಾವೆಲ್ ಎಕ್ಸ್​ಪೋ ಕಾರ್ಯಕ್ರಮವನ್ನು ಉದ್ಘಾಟಿಸುವ ಮೊದಲು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಮುಖ್ಯಮಂತ್ರಿಗೆ ಹೂ ಮಾಲೆ ಹಾಕಿದರೆ ಅಧಿಕಾರಿಯೊಬ್ಬರು 12ನೇ ಶತಮಾನದ ಸಮಾಜ ಸುಧಾರಕ, ಸಮಾನತೆಯ ಪ್ರತಿಪಾದಕ ಜಗಜ್ಯೋತಿ ಬಸವಣ್ಣನವರ ಪೋರ್ಟೇರ್ಟ್ ನೀಡಿ ಗೌರವಿಸಿದರು.

ಬೆಂಗಳೂರು, ಫೆ. 26: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಇಂಟರ್​ನ್ಯಾಷನಲ್ ಟ್ರಾವೆಲ್ ಎಕ್ಸ್​ಪೋಗೆ ಚಾಲನೆ ನೀಡಿದರು. ಎರಡು ವಾರಗಳಿಗೂ ಹೆಚ್ಚಿನ ಅವಧಿಯಿಂದ ಮಂಡಿನೋವಿಗೆ ತುತ್ತಾಗಿರುವ ಮುಖ್ಯಮಂತ್ರಿ ವೈದ್ಯರ ಸಲಹೆ ಮೇರೆಗೆ ವ್ಹೀಲ್ ಚೇರ್ ಮೇಲೆ ಕೂತ್ಕೊಂಡೇ ಓಡಾಟ ನಡೆಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಕಮಕ್ಕೂ ಅವರು ವ್ಹೀಲ್ ಚೇರ್​​​​ನಲ್ಲಿ ಅಗಮಿಸಿದರು. ಸಚಿವ ಕೆಹೆಚ್ ಮುನಿಯಪ್ಪ, ಹೆಚ್ ಕೆ ಪಾಟೀಲ್, ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಪರಿಷತ್ ಸದಸ್ಯ ಕೆ ಗೋವಿಂದರಾಜು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಬಹಿರಂಗ ಪತ್ರ: ಕುತೂಹಲ ಮೂಡಿಸಿದ ನಡೆ