Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ಸಿಗಲಾರದೆಂಬ ಅತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹರನ್ನು ಲೇವಡಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಟಿಕೆಟ್ ಸಿಗಲಾರದೆಂಬ ಅತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹರನ್ನು ಲೇವಡಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 12, 2024 | 6:25 PM

ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು

ಚಾಮರಾಜನಗರ: ನಗರದಲ್ಲಿಂದು ಆಯೋಜಿಸಲಾಗಿದ್ದ ಆರ್ ಧ್ರುವನಾರಾಯಣ (R Dhruvanarayana) ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಸಂಸದ ಪ್ರತಾಪ್ ಸಿಂಹರನ್ನು (Pratap Simha) ಲೇವಡಿ ಮಾಡಿದರು. ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಅಸಲು ವಿಷಯವೇನೆಂದರೆ, ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ, ಅಭ್ಯರ್ಥಿ ಯಾರು ಅನ್ನೋದು ತಮಗೆ ಸಂಬಂಧವಿಲ್ಲದ ವಿಚಾರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆನ್ನುವುದಷ್ಟೇ ತಮ್ಮ ಗುರಿ, ಬಡವರ ಮತ್ತು ಜನಪರ ಕಾರ್ಯಕ್ರಮಗಳನ್ನು ಜನತೆಗೆ ನೀಡಿದ್ದೇವೆ, ಅವುಗಳ ಆಧಾರದ ಮೇಲೆ ಮತಯಾಚಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಅದೇ ಪಕ್ಷದ ಸಂಕಲ್ಪವಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು: ಟಿಕೆಟ್ ಕೈತಪ್ಪುವ ವದಂತಿ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ