AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಹಾನಿ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಂದುಹೋದರು, ನಮ್ಮೊಂದಿಗೆ ಮಾತಾಡಲಿಲ್ಲ: ಸಾಯಿ ಲೇಔಟ್ ನಿವಾಸಿಗಳು

ಮಳೆಹಾನಿ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಂದುಹೋದರು, ನಮ್ಮೊಂದಿಗೆ ಮಾತಾಡಲಿಲ್ಲ: ಸಾಯಿ ಲೇಔಟ್ ನಿವಾಸಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2025 | 6:31 PM

ಇವರ ಒಂದು ಊಟ ಬೇಕಿತ್ತಾ ನಮಗೆ? ಊಟವಾದರೂ ಎಂಥದ್ದು? ಅನ್ನ ಚಪಾತಿ ಕೊಟ್ಟಿದ್ದಾರೆ, ಅದಕ್ಕೆ ಸಾಂಬಾರು ಪಲ್ಯ ಇಲ್ಲ, ನಮ್ಮ ಮನೆಯಲ್ಲಿ 5 ಜನ ಇದ್ದೇವೆ ಎಂದು ಬರೆಸಲಾಗಿತ್ತು, ಅದರೆ ಸಿಕ್ಕಿದ್ದು ಮೂರು ಊಟ ಮಾತ್ರ ಎಂದು ಒಬ್ಬ ವ್ಯಕ್ತಿ ಕೋಪದಲ್ಲಿ ಕೇಳುತ್ತಾರೆ. ಯಾವ ಪುರುಷಾರ್ಥ ಸಾಧನೆಗೆ ಇವರು ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಭೇಟಿ ನೀಡಿದರು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು, ಮೇ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ನಗರದ ಸಾಯಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿದರು. ಸಮಸ್ಯೆಗಳಿಗೆ ಏನಾದರೂ ಪರಿಹಾರ ಸೂಚಿಸಿದರೆ ಅಂತ ಬಡಾವಣೆಯ ನಿವಾಸಿಗಳನ್ನು ಕೇಳಿದರೆ ಪರಿಹಾರವಿಲ್ಲ ಎಂಥದ್ದೂ ಇಲ್ಲ, ಸಿಎಂ ಎಸಿ ಬಸ್ಸಲ್ಲಿ ಬಂದರು, ವಾಪಸ್ಸು ಹೋದರು, ನಮ್ಮ ಕಷ್ಟಗಳನ್ನು ವಿಚಾರಿಸುವ ಮಾತು ಹಾಗಿರಲಿ, ಯಾರೊಂದಿಗೂ ಮಾತಾಡದೆ ವಾಪಸ್ಸು ಹೋಗುಬಿಟ್ಟರು, ನಮ್ಮ ಮನೆಗಳಲ್ಲಿ ನೀರು ಹೊಕ್ಕು ಟಿವಿ, ಫ್ರಿಡ್ಜ್, ಮಿಕ್ಸರ್, ವಾಷಿಂಗ್ ಮಷೀನ್-ಎಲ್ಲ ಹಾಳಾಗಿವೆ, ಮನೆಯಲ್ಲಿ ಒಲೆ ಹಚ್ಚಲಾಗುತ್ತಿಲ್ಲ, ಮಕ್ಕಳು ಸಹ ಉಪವಾಸ ಇವೆ ಎಂದು ಒಬ್ಬ ಗೃಹಿಣಿ ಹೇಳುತ್ತಾರೆ.

ಇದನ್ನೂ ಓದಿ:  ಕೆಅರ್ ಪುರದ ಸಾಯಿ ಲೇಔಟ್​ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ