ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್ ಕೊಡಲು ರಣತಂತ್ರ
ಬಳ್ಳಾರಿ ರಾಜ್ಯ ರಾಜಕಾರಣದ ಅತ್ಯಂತ ಪ್ರಮುಖ ಕದನವಾಗಿ ಮಾರ್ಪಟ್ಟಿದೆ. ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರತಿತಂತ್ರ ಮಾಡುತ್ತಿದೆ. ಈಗಾಗಲೇ ನನಗೂ ಪಾದಯಾತ್ರೆಗೆ ಅನುಮತಿ ಕೊಡಿ ಅಂತಾ ಹೈಕಮಾಂಡ್ಗೆ ನಾಗೇಂದ್ರ ಮನವಿ ಮಾಡಿದ್ರು. ಆದ್ರೆ ನಾಗೇಂದ್ರ ಪರ ಫೀಲ್ಡಿಗಿಳಿಯುವಂತೆ ಕಾಂಗ್ರೆಸ್ ಶಾಸಕರಿಗೆ ವರಿಷ್ಠರು ಸೂಚನೆ ಕೊಟ್ಟಿದ್ರು. ಇದೀಗ ಸಿಎಂ ಡಿಕೆಶಿನೂ ಅಖಾಡಕ್ಕಿಳಿದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 01): ಬಿಜೆಪಿ ಪಾದಯಾತ್ರೆಗೆ (BJP Padayatra) ಕೌಂಟರ್ ಕೊಡಲು ಖುದ್ದು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಅಖಾಡಕ್ಕಿಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿಗೆ ಟಕ್ಕರ್ ನೀಡಲು ನಾಳೆ (ಸೆಪ್ಟೆಂಬರ್ 02) ಕಲ್ಯಾಣ ಕರ್ನಾಟಕ ಭಾಗದ ನಾಯಕರ ಸಭೆ ಕರೆದಿದ್ದಾರೆ. ಸಚಿವರು, ಶಾಸಕರು, ಸಂಸದರ ಜೊತೆಗಿನ ಸಭೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದ್ದು,ಬಿಜೆಪಿಗೆ ಹೇಗೆ ಪ್ರತ್ಯುತ್ತರ ನೀಡಬೇಕೆಂದು ರಣತಂತ್ರ ರೂಪಿಸಲಿದ್ದಾರೆ.
ಕಲ್ಯಾಣ ಕರ್ನಾಟಕದ 3 ಜಿಲ್ಲೆಗಳ ಶಾಸಕರ ಸಭೆ ಕರೆದಿರೋ ಸಿಎಂ ಡಿಕೆ.ಶಿವಕುಮಾರ್, ಬಿಜೆಪಿ ಪಾದಯಾತ್ರೆಗೆ ಕೌಂಟರ್ ಅಟ್ಯಾಕ್ ಮಾಡಲು ಸಿದ್ಧವಿರುವಂತೆ ಸೂಚನೆ ಕೊಟ್ಟಿದ್ದಾರೆ. ಸಿಎಂ ಡಿಕೆಶಿ ಮಾತ್ರ ಅಲ್ಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ಸೂಚನೆ ಕೊಟ್ಟಿದ್ದಾರೆ. ಎಲ್ಲರೂ ಕಲ್ಯಾಣ ಕರ್ನಾಟಕಕ್ಕೆ ತೆರಳಿ ಬಿಜೆಪಿ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಬೇಕು. BJP ಯಾವುದೇ ವಿಷಯ ಪ್ರಸ್ತಾಪ ಮಾಡಿದ್ರೂ ಅದಕ್ಕೆ ತಿರುಗೇಟು ಕೊಟೋಕೆ ರಾಜ್ಯ ಕಾಂಗ್ರೆಸ್ ಘಟಕ ರಣತಂತ್ರ ರೂಪಿಸಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ & ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಮುಖಂಡರಿಗೂ ಸಭೆಗೆ ಆಹ್ವಾನ ಕೊಡಲಾಗಿದೆ.
