AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದಲ್ಲೂ ಬೆಳೆಯುತ್ತಿರುವ ನನ್ನ ಪ್ರಭಾವ ಕುಂಠಿತಗೊಳಿಸುವುದು ಕಾಂಗ್ರೆಸ್ ಹುನ್ನಾರ: ಕುಮಾರಸ್ವಾಮಿ

ಕೇಂದ್ರದಲ್ಲೂ ಬೆಳೆಯುತ್ತಿರುವ ನನ್ನ ಪ್ರಭಾವ ಕುಂಠಿತಗೊಳಿಸುವುದು ಕಾಂಗ್ರೆಸ್ ಹುನ್ನಾರ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2024 | 2:40 PM

Share

ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ತಾನು ಕಾಂಗ್ರೆಸ್ ನಾಯಕರ ಕುತಂತ್ರಗಳನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ ಕುಮಾರಸ್ವಾಮಿ ತಮಗೆ ಕೇವಲ 19 ಸ್ಥಾನ ದಕ್ಕಿದ್ದರೂ 12 ಶಾಸಕರನ್ನು ಖರೀದಿಸುವ ಪ್ರಯತ್ನ ಕಾಂಗ್ರೆಸ್ ಪಕ್ಷದಿಂದ ನಡೆಯಿತು, ಅದರೆ ಅದು ಸಾಧ್ಯವಾಗದೆ ಹೋಗಿದ್ದು ಬೇರೆ ವಿಚಾರ ಎಂದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸ್ಥಳೀಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸುವುದು ಅನಿವಾರ್ಯವಾಗಿತ್ತು, ಆದರೆ ಕಾಂಗ್ರೆಸ್ ನಾಯಕರ ಟಾರ್ಗೆಟ್ ಅವರಲ್ಲ, ನಿಖಿಲ್​ರನ್ನು ಸೋಲಿಸುವ ಮೂಲಕ ಕೇಂದ್ರದಲ್ಲಿ ಮಂತ್ರಿಯಾಗಿ ಹೆಚ್ಚುತ್ತಿರುವ ತನ್ನ ಪ್ರಭಾವ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಅವರ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು ವಲಸಿಗನಲ್ಲ, ಕನ್ನಡದ ಮಣ್ಣಲ್ಲಿ ಹುಟ್ಟಿದವನು, ರಾಮನಗರ ಕರ್ಮಭೂಮಿ: ಹೆಚ್ ಡಿ ಕುಮಾರಸ್ವಾಮಿ