AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಷಾಡ ಶುಕ್ಲ ಏಕಾದಶಿ ರಾಶಿಫಲ: ಈ ರಾಶಿಯವರಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಯಾರಿಗೆ ಗೃಹ-ವಿವಾಹ ಯೋಗ?

ಆಷಾಡ ಶುಕ್ಲ ಏಕಾದಶಿ ರಾಶಿಫಲ: ಈ ರಾಶಿಯವರಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಯಾರಿಗೆ ಗೃಹ-ವಿವಾಹ ಯೋಗ?

ಅಕ್ಷಯ್​ ಪಲ್ಲಮಜಲು​​
|

Updated on: Jul 25, 2026 | 6:20 AM

Share

ಜುಲೈ 25, 2026ರ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ದಿನದ ಗ್ರಹಸ್ಥಿತಿ, ದೇವಶಯನಿ ಏಕಾದಶಿಯ ಮಹತ್ವ ಹಾಗೂ 12 ರಾಶಿಗಳ ಮೇಲೆ ಚಂದ್ರನ ಸಂಚಾರದ ಪರಿಣಾಮಗಳನ್ನು ವಿಶ್ಲೇಷಿಸಲಾಗಿದೆ. ಆರ್ಥಿಕ, ವೃತ್ತಿ, ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳಲ್ಲಿನ ಶುಭಾಶುಭಗಳನ್ನು ಗುರೂಜಿ ಮಾರ್ಗದರ್ಶನ ಮಾಡಿದ್ದಾರೆ.

ಬೆಂಗಳೂರು, ಜು.25: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 25, ಶನಿವಾರದ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಡ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿಯ ಈ ದಿನ, ಜೇಷ್ಠ ನಕ್ಷತ್ರ ಮತ್ತು ವೈದೃತಿ ಯೋಗವಿದೆ. ಈ ದಿನವನ್ನು ದೇವಶಯನಿ ಏಕಾದಶಿ ಎಂದು ಆಚರಿಸಲಾಗುತ್ತಿದ್ದು, ಚಾತುರ್ಮಾಸ ವ್ರತದ ಪೂರ್ವತಯಾರಿಗೆ ವಿಶೇಷವಾಗಿದೆ. ಉಡುಪಿ ಸೇರಿದಂತೆ ಅನೇಕ ಮಠಗಳಲ್ಲಿ ತಪ್ತ ಮುದ್ರಾ ಧಾರಣೆಯಂತಹ ಮಹತ್ವದ ಕಾರ್ಯಗಳು ನಡೆಯುತ್ತವೆ. ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ವೃಶ್ಚಿಕ ರಾಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಆದಾಯ ಹೆಚ್ಚಳ, ರೈತರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಶುಭ, ಹಳೆ ಬಾಕಿ ವಸೂಲಿ ಆಗುವ ಸಾಧ್ಯತೆಗಳಿವೆ. ವೃಷಭ ರಾಶಿಯವರಿಗೆ ಹಣ ಬಂದರೂ ಖರ್ಚು ಹೆಚ್ಚಾಗುವ ಸಂಭವವಿದ್ದು, ಗೃಹ ನಿರ್ಮಾಣ ಯೋಗವಿದೆ. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲ, ಆಸ್ತಿ ವಿಚಾರದಲ್ಲಿ ಗೊಂದಲ ನಿವಾರಣೆ. ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ವಾಹನ ಯೋಗ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಕೀರ್ತಿ ಪ್ರತಿಷ್ಠೆ. ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿ, ಕಾನೂನು ವಿಷಯಗಳಲ್ಲಿ ಶುಭ. ತುಲಾ ರಾಶಿಯವರಿಗೆ ಆರ್ಥಿಕ ಲಾಭ, ಹೊಸ ವ್ಯಾಪಾರಕ್ಕೆ ಪ್ರಯತ್ನ. ವೃಶ್ಚಿಕ ರಾಶಿಯವರಿಗೆ ಅರ್ಧಂಬರ್ಧ ಕೆಲಸಗಳು ಪೂರ್ಣ, ವಿವಾಹ ಯೋಗ. ಧನು ರಾಶಿಯವರಿಗೆ ಅದೃಷ್ಟ ಮತ್ತು ದೈವ ಬಲ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ. ಮಕರ ರಾಶಿಯವರಿಗೆ ಯಶಸ್ಸು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ. ಕುಂಭ ರಾಶಿಯವರಿಗೆ ಅಧಿಕಾರ ಪ್ರಾಪ್ತಿ, ಋಣಭಾದೆಯಿಂದ ಮುಕ್ತಿ. ಮೀನ ರಾಶಿಯವರಿಗೆ ಆರ್ಥಿಕ ಲಾಭ, ಧರ್ಮ ಕಾರ್ಯಗಳಲ್ಲಿ ಭಾಗಿ. ಈ ದಿನ ಪ್ರತಿಯೊಂದು ರಾಶಿಯವರಿಗೂ ಆಯಾ ಗ್ರಹಸ್ಥಿತಿಗೆ ಅನುಗುಣವಾಗಿ ಶುಭ, ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ತಿಳಿಸಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us