ಕೋರ್ಟ್​ ಒಳಗೆ ನಡೆದ ವಾದ ಏನು? ಮಾಹಿತಿ ನೀಡಿದ ದರ್ಶನ್​ ಪರ ವಕೀಲರು

| Updated By: ಮದನ್​ ಕುಮಾರ್​

Updated on: Jun 11, 2024 | 8:57 PM

‘ದರ್ಶನ್​ ಅವರು ಖಂಡಿತವಾಗಿಯೂ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಭಾಗಿ ಆಗಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಯಾವುದೋ ಷಡ್ಯಂತ್ರದಿಂದ ಅವರ ಮೇಲೆ ವಿವಾದ ಎಳೆದಿದ್ದಾರೆ’ ಎಂದು ದರ್ಶನ್​ ಪರ ವಕೀಲ ನಾರಾಯಣ ಸ್ವಾಮಿ ಹೇಳಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು (ಜೂನ್​ 11) ನ್ಯಾಯಾಲಯದಲ್ಲಿ ಏನು ನಡೆಯಿತು ಎಂಬುದನ್ನು ಲಾಯರ್​ ವಿವರಿಸಿದ್ದಾರೆ.

ನಟ ದರ್ಶನ್​ (Darshan) ಈಗ ಪೊಲೀಸ್​ ಕಸ್ಟಡಿಯಲ್ಲಿ ಇದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸ್​ ಕಸ್ಟಡಿಗೆ (Police Custody) ನೀಡಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಮುಗಿದ ಬಳಿಕ ಅವರ ಪರ ಲಾಯರ್​ ನಾರಾಯಣ ಸ್ವಾಮಿ ‘ಟಿವಿ9 ಕನ್ನಡ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕೋರ್ಟ್​ನಲ್ಲಿ ಆಗಿರೋದು ಇಷ್ಟೇ. 15 ದಿನ ಕಸ್ಟಡಿಗೆ ಕೇಳಿದರು. ಆದರೆ ಅಷ್ಟು ದಿನ ಕಸ್ಟಡಿಗೆ ನೀಡಿಲ್ಲ. ಸ್ಟ್ರಾಂಗ್​ ಆಗಿ ವಿರೋಧ ಮಾಡಿದ್ದರಿಂದ 6 ದಿನ ಕಸ್ಟಡಿಗೆ ನೀಡಿದ್ದಾರೆ. ಅದು ಕೂಡ ಕೇವಲ ವಿಚಾರಣೆ ಸಲುವಾಗಿ ಮಾತ್ರ. ವಕೀಲರನ್ನು ಪ್ರತಿ ದಿನ ಭೇಟಿ ಮಾಡಿಸಬೇಕು, ಪ್ರತಿ ಎರಡು ದಿನಕ್ಕೆ ತನಿಖೆಯ ವಿವರವನ್ನು ನ್ಯಾಯಾಲಯಕ್ಕೆ ನೀಡಬೇಕು ಅಂತ ಜಡ್ಜ್​ ಸೂಚನೆ ನೀಡಿದ್ದಾರೆ’ ಎಂದು ದರ್ಶನ್​ ಪರ ವಕೀಲರು ಹೇಳಿದ್ದಾರೆ. ಅಲ್ಲದೇ, ಈ ಕೇಸ್​ನಲ್ಲಿ ದರ್ಶನ್​ ಅವರಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on