AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರು ದಾಖಲಿಸಲು ಐದು ದಿನ ಯಾಕೆ ಕಾದೆ ಅಂತ ಅಂಧಾಭಿಮಾನಿಗಳು ಅರ್ಥಮಾಡಿಕೊಳ್ಳಬೇಕು: ಪ್ರಥಮ್ ನಟ

ದೂರು ದಾಖಲಿಸಲು ಐದು ದಿನ ಯಾಕೆ ಕಾದೆ ಅಂತ ಅಂಧಾಭಿಮಾನಿಗಳು ಅರ್ಥಮಾಡಿಕೊಳ್ಳಬೇಕು: ಪ್ರಥಮ್ ನಟ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 29, 2025 | 6:17 PM

Share

ಒಂದು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ದೂರು ದರ್ಶನ್ ವಿರುದ್ಧ ದಾಖಲಾಗೋದು ಬೇಡ ಅಂತ ಐದು ದಿನಗಳವರೆಗೆ ದೂರು ದಾಖಲಿಸಲಿಲ್ಲ, ಬೇರೆಯಾವರಾಗಿದ್ದರೆ ಅವತ್ತೇ ದೂರು ದಾಖಲಿಸಿರುತ್ತಿದ್ದೆ, ಇದನ್ನು ಅಂಧಾಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು, ದರ್ಶನ್ ಅವರಿಗಿರುವಂತೆ ನನಗೂ ಫ್ಯಾಮಿಲಿ ಇದೆ, ಟ್ರೋಲ್ ಮಾಡಿರೋದನ್ನು ನೋಡಿ ನನ್ನ ಫ್ಯಾಮಿಲಿ ಕೂಡ ಹರ್ಟ್ ಆಗುತ್ತದೆ ಎಂದು ಪ್ರಥಮ್ ಹೇಳಿದರು.

ಬೆಂಗಳೂರು, ಜುಲೈ 29: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ದೂರು ಸಲ್ಲಿಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ದರ್ಶನ್ (actor Darshan) ಸೇರಿದಂತೆ ಅವರ ಅಭಿಮಾನಿಗಳ ಮೇಲೆ ದಾಳಿ ನಡೆಸಿದರು. ತನಗೆ ವೆಪನ್ ತೋರಿಸಿದವನು ದರ್ಶನ್ ಜೈಲಲ್ಲಿದ್ದಾಗ ಅವರ ಬ್ಯಾರಕ್ ನಲ್ಲಿದ್ದ ಒಬ್ಬ ಕೈದಿ, ಅದಾದ ಬಳಿಕ ನನ್ನ ವಿರುದ್ಧ ಎರಡು ಸಾವಿರ ಅಕೌಂಟ್ ಗಳಿಂದ ಟ್ರೋಲ್ ಮಾಡಿಸಿದ್ದಾರೆ, ನಾನು ಕಂಪ್ಲೇಂಟ್ ಕೊಡಲು ನಿರ್ಧರಿಸಿದಾಗ ಏನ್ ಕಿತ್ತುಕೊಳ್ತಾನೋ ಕಿತ್ತುಕೊಳ್ಳಲಿ, ಅಂತ ದರ್ಶನ್ ಹೇಳಿದ್ದಾರೆ, ಅವರಿಂದ ನಾನು ಏನು ಕಿತ್ತುಕೊಳ್ಳಲು ಸಾಧ್ಯ? ಅವರು ತಲೆಗೆ ವಿಗ್ ಹಾಕುತ್ತಾರೆ ಅಂತ ಮಾಧ್ಯಮಗಳಲ್ಲಿ ತೋರಿಸಿದ್ದಾರೆ ಎಂದು ಪ್ರಥಮ್ ಹೇಳಿದರು. ದರ್ಶನ್ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ಹೇಳಿಕೆ ದಾಖಿಲಿಸುವರೆಗೆ ನಾನು ಇಲ್ಲೇ ಆಮರಣಾಂತ ಉಪವಾಸ ಧರಣಿಗೆ ಕೂರೋದಾಗಿ ಪ್ರಥಮ್ ಹೇಳಿದರು.

ಇದನ್ನೂ ಓದಿ:  ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ