ಡಿಸಿಎಂ ಆಗ್ತೀರಾ ಅಥವಾ ಜೈಲಿಗೆ ಹೋಗ್ತೀರಾ: ಡಿಕೆ ಶಿವಕುಮಾರ್ ಆಯ್ಕೆ ಮಾಡಿಕೊಂಡಿದ್ದೇನು ಗೊತ್ತಾ?
ಡಿಸಿಎಂ ಡಿ.ಕೆ.ಶಿವಕುಮಾರ್ ಶಾಸಕರ ಪಕ್ಷಾಂತರ ಯತ್ನದ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಿಜೆಪಿಗೆ ಸೇರಲು ಹೊರಟಿದ್ದ 5-6 ಶಾಸಕರನ್ನು ತಡೆದಿದ್ದೆ. "ಡಿಸಿಎಂ ಆಗಿ ಅಥವಾ ಜೈಲಿಗೆ ಹೋಗಿ" ಎಂಬ ಆಫರ್ ಬಂದಾಗ ಪಕ್ಷ ನಿಷ್ಠೆಗೆ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಅಕ್ಟೋಬರ್ 15: ಅಂದು ಮನಸ್ಸು ಮಾಡಿದ್ದರೆ ಡಿಸಿಎಂ ಆಗಬಹುದಿತ್ತು, ಪಕ್ಷ ನಿಷ್ಠೆ ಅಂತಾ ಒಪ್ಪಲಿಲ್ಲ. ಜೈಲಿಗೆ ಹೋಗುತ್ತೇನೆ ಅಂದೆ ಎಂದಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಫ್ಕೆಸಿಸಿಐ ಸಭಾಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಮಾತನಾಡಿದ ಅವರು, ಅಂದು ಡಿಸಿಎಂ ಆಗ್ತೀರಾ ಅಥವಾ ಜೈಲಿಗೆ ಹೋಗ್ತೀರಾ 2ರಲ್ಲಿ 1 ಆಯ್ಕೆ ಮಾಡಿ. ಶಾಸಕರನ್ನೂ ವಾಪಸ್ ಕಳಿಸಿ ಅಂದರು. ಅಂದು ಪಕ್ಷದ ನಿಷ್ಠೆಗಾಗಿ ಡಿಸಿಎಂ ಬೇಡ, ಜೈಲಿಗೆ ಹೋಗುತ್ತೇನೆ ಅಂದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

