AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradeep Eshwar: ಚಿಕ್ಕಬಳ್ಳಾಪುರದಿಂದ ಅಸೆಂಬ್ಲಿಗೆ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ದೈತ್ಯಸಂಹಾರಿ ಮಾತ್ರ ಅಲ್ಲ; ನಿಗರ್ವಿ, ನಮ್ರ ಮತ್ತು ಸಂಸ್ಕಾರಿಯೂ ಹೌದು!

Pradeep Eshwar: ಚಿಕ್ಕಬಳ್ಳಾಪುರದಿಂದ ಅಸೆಂಬ್ಲಿಗೆ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ದೈತ್ಯಸಂಹಾರಿ ಮಾತ್ರ ಅಲ್ಲ; ನಿಗರ್ವಿ, ನಮ್ರ ಮತ್ತು ಸಂಸ್ಕಾರಿಯೂ ಹೌದು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2023 | 7:02 PM

ತನಗಿಂತ ದೊಡ್ಡವರನ್ನು ಅವರು ಕಾಲುಮುಟ್ಟಿ ನಮಸ್ಕರಿಸುವುದನ್ನು ಸಹ ಇಲ್ಲಿ ನೋಡಬಹುದು. ಪ್ರದೀಪ್ ಈಶ್ವರ್ ಒಬ್ಬ ಸಂಸ್ಕಾರವಂತ ರಾಜಕಾರಣಿಯೂ ಹೌದು.

ಬೆಂಗಳೂರು: ಚಿಕ್ಕಬಳ್ಳಾಪುರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಪ್ರದೀಪ್ ಈಶ್ವರ್ (Pradeep Eshwar) ನಿಸ್ಸಂದೇಹವಾಗಿ ಕರ್ನಾಟಕ ರಾಜಕಾರಣದಲ್ಲಿ ಹೊಸ ಸೆನ್ಸೇಷನ್! ಡಾ ಕೆ ಸುಧಾಕರ್ ರಂಥ (Dr K Sudhakar) ಅತಿರಥನನ್ನು ಸೋಲಿಸಿದರೂ ನೆಲಕ್ಕೆ ಅಂಟಿಕೊಂಡಿರುವ ನಿಗರ್ವಿ ಮತ್ತು ವಿನಯಶೀಲ ಯುವ ರಾಜಕಾರಣಿ. ಇವತ್ತು ಬೆಳಗ್ಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರದೀಪ್ ಜನರ ಮನೆಗಳಿಗೆ ಹೋಗಿ ಅವರ ಕಷ್ಟ ಸುಖ ವಿಚಾರಿಸುತ್ತಿದ್ದರು. ಸಾಯಂಕಾದಷ್ಟೊತ್ತಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಅಯ್ಕೆಯಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ರನ್ನು (DK Shivakumar) ಸ್ವಾಗತಿಸಲು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ನಿಲ್ದಾಣದ ಬಳಿ ನೆರೆದಿರುವ ಜನರ ಗಮನವೆಲ್ಲ ಪ್ರದೀಪ್ ಈಶ್ವರ್ ಮೇಲಿದೆ. ಪೊಲೀಸರು ಕೂಡ ಅವರೊಂದಿಗೆ ಸೆಲ್ಪೀ ತೆಗೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ತನಗಿಂತ ದೊಡ್ಡವರನ್ನುಅವರು ಕಾಲುಮುಟ್ಟಿ ನಮಸ್ಕರಿಸುವುದನ್ನು ಸಹ ಇಲ್ಲಿ ನೋಡಬಹುದು. ಪ್ರದೀಪ್ ಈಶ್ವರ್ ಒಬ್ಬ ಸಂಸ್ಕಾರವಂತ ರಾಜಕಾರಣಿಯೂ ಹೌದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ