AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಅನಿಲ್ ಕುಂಬ್ಳೆ ಹೀಗೆಂದಿದ್ದೇಕೆ ನೋಡಿ

ಆರ್​ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಅನಿಲ್ ಕುಂಬ್ಳೆ ಹೀಗೆಂದಿದ್ದೇಕೆ ನೋಡಿ

Ganapathi Sharma
|

Updated on: Jun 03, 2025 | 12:57 PM

Share

ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕಗೊಂಡಿರುವ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಐಪಿಎಲ್ ಫೈನಲ್ ಆಡುತ್ತಿರುವ ಆರ್​ಸಿಬಿಗೆ ಶುಭ ಹಾರೈಸಿದ್ದಾರೆ. ಆದರೆ, ಆರ್​ಸಿಬಿ ಗೆಲ್ಲುತ್ತದೆ ಎಂದು ಈಗಲೇ ಹೇಳಬೇಡಿ. ಆದರೆ, ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು, ಹಾರೈಕೆ ಎಂದರು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಜೂನ್ 3: ಐಪಿಎಲ್ ಫೈನಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಇದೇ ತಂಡದ ಮಾಜಿ ನಾಯಕರೂ ಆಗಿರುವ ಅನಿಲ್ ಕುಂಬ್ಳೆ ಶುಭ ಹಾರೈಸಿದ್ದಾರೆ. ಆದರೆ, ಆರ್​ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್​​ಸಿಬಿ ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು. ಹಾಗೆಯೇ ಆಗಲಿ ಎಂದು ಹಾರೈಸೋಣ ಎಂದರು. ಪಂಜಾಬ್​ ತಂಡದಲ್ಲೂ ನಾನು ಆಡಿದ್ದೆ. ಆರ್​​ಸಿಬಿಯಲ್ಲೂ ಆಡಿದ್ದೆ. ಎರಡೂ ತಂಡಗಳು ಬೆಸ್ಟ್. ಉತ್ತಮ ಪ್ರದರ್ಶನ ನೀಡಿದ ತಂಡಗಳೇ ಫೈನಲ್​ ಪ್ರವೇಶಿಸಿವೆ. ಆರ್​ಸಿಬಿ ಗೆಲ್ಲಲಿ ಎಂಬುದು ಹಾರೈಕೆ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ