AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಕಪ್ ಗೆಲ್ಲೋ ಭರವಸೆಯಲ್ಲಿ ಹೋಳಿಗೆ ವಿತರಣೆ!

ಆರ್​ಸಿಬಿ ಕಪ್ ಗೆಲ್ಲೋ ಭರವಸೆಯಲ್ಲಿ ಹೋಳಿಗೆ ವಿತರಣೆ!

ನವೀನ್ ಕುಮಾರ್ ಟಿ
| Updated By: Ganapathi Sharma|

Updated on: Jun 03, 2025 | 12:17 PM

Share

18 ವರ್ಷಗಳ ಬಳಿಕ ಆರ್​ಸಿಬಿ ಐಪಿಎಲ್ ಕಪ್ ಗೆಲ್ಲುವ ಸಂಭ್ರಮದಲ್ಲಿ ಒಂದಡೆ ಅಭಿಮಾನಿಗಳು ಇದ್ದರೆ, ಮತ್ತೊಂದೆಡೆ ದೇವನಹಳ್ಳಿಯ ವೆಜ್ ಲ್ಯಾಂಡ್ ಹೋಟೆಲ್ ಮಾಲೀಕ ನಂಜುಂಡಿ ತಮ್ಮ ಗ್ರಾಹಕರಿಗೆ ಹೋಳಿಗೆ ಊಟ ಹಾಕಿಸಲು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ವೆಜ್ ಲ್ಯಾಂಡ್ ರೆಸ್ಟೋರೆಂಟ್​​ನಲ್ಲಿ ಇಂದು ಮಧ್ಯಾಹ್ನದಿಂದ ರಾತ್ರಿ ಪಂದ್ಯ ಮುಗಿಯುವ ವರೆಗೆ ಹೋಳಿಗೆ ವಿತರಣೆ ನಡೆಯಲಿದೆ.

ದೇವನಹಳ್ಳಿ, ಜೂನ್ 3: ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಆರ್​​ಸಿಬಿ ತಂಡ ಕಪ್ ಗೆಲ್ಲುವ ಭರವಸೆಯೊಂದಿಗೆ ದೇವನಹಳ್ಳಿಯ ವೆಜ್ ಲ್ಯಾಂಡ್ ಹೋಟೆಲ್ ಮಾಲೀಕ ನಂಜುಂಡಿ ಗ್ರಾಹಕರಿಗೆ ಹೋಳಿಗೆ ವಿತರಣೆ ಮಾಡುತ್ತಿದ್ದಾರೆ. ಆರ್​ಸಿಬಿ ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎಂದಿರುವ ಅವರು, ಇಂದು ಮಧ್ಯಾಹ್ನದಿಂದ ರಾತ್ರಿ ಮ್ಯಾಚ್ ಗೆಲ್ಲುವವರೆಗೂ ಗ್ರಾಹಕರಿಗೆ ಹೋಳಿಗೆ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ