AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

ರಾಜೇಶ್ ದುಗ್ಗುಮನೆ
|

Updated on: Jan 08, 2024 | 8:34 AM

Share

ಪ್ರತಾಪ್ ಅವರು ಬದಲಾಗುವುದಾಗಿ ಸುದೀಪ್ ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

ಯಾರಾದರೂ ಏನಾದರೂ ಹೇಳಿದರೆ, ಆರೋಪ ಮಾಡಿದರೆ ಡ್ರೋನ್ ಪ್ರತಾಪ್ ಅವರು ಅಷ್ಟಾಗಿ ರಿಯಾಕ್ಟ್ ಮಾಡೋಕೆ ಹೋಗುತ್ತಿರಲಿಲ್ಲ. ಆದರೆ, ಅವರು ಬದಲಾಗುವುದಾಗಿ ಸುದೀಪ್ (Sudeep) ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ‘ಡ್ರೋನ್ ಪ್ರತಾಪ್ ನಾಟಕ ಮಾಡಿಕೊಂಡು, ಎಲ್ಲರಿಗೆ ಬೂದಿ ಎರಚಿಕೊಂಡು ಇದ್ದಾನೆ’ ಎಂದರು ವಿನಯ್. ಅಲ್ಲದೆ ಏಕವಚನದಲ್ಲಿ ಪ್ರತಾಪ್​ನ ಸಂಬೋಧಿಸಿದರು. ಇದು ಪ್ರತಾಪ್​ಗೆ ಕೋಪ ತರಿಸಿದೆ. ‘ನೀವು ಹೇಳಿದ್ದೆಲ್ಲ ಹೇಳಿಸಿಕೊಂಡು ಇರೋಕೆ ಆಗಲ್ಲ. ಪರಿಣಾಮ ನೆಟ್ಟಗೆ ಇರಲ್ಲ’ ಎಂದಿದ್ದಾರೆ ಪ್ರತಾಪ್. ಇಂದು (ಜನವರಿ 8) ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More