AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಬಾಮೈದನಿಗೆ ED ಶಾಕ್:ಮೈಸೂರಿನ ಸ್ನೇಹಿತೆಯ ನಿವಾಸದಲ್ಲೂ ಪರಿಶೀಲನೆ

ಸತೀಶ್ ಜಾರಕಿಹೊಳಿ ಬಾಮೈದನಿಗೆ ED ಶಾಕ್:ಮೈಸೂರಿನ ಸ್ನೇಹಿತೆಯ ನಿವಾಸದಲ್ಲೂ ಪರಿಶೀಲನೆ

ರಾಮ್​, ಮೈಸೂರು
| Edited By: |

Updated on:Jun 24, 2026 | 3:20 PM

Share

ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಳಿಯ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಂಜುನಾಥಗೆ ಸೇರಿದ ಬೆಳಗಾವಿ, ಬೆಂಗಳೂರು ಸೇರಿದಂತೆ ಎಲ್ಲಾ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೈಸೂರಿನಲ್ಲಿ ಮಂಜುನಾಥ್ ಅವರ ಸ್ನೇಹಿತಯ ಮನೆ ಮೇಲೆ ದಾಳಿಯಾಗಿದೆ.

ಮುಖ್ಯಾಂಶಗಳು

  • ಸಚಿವ ಸತೀಶ್ ಜಾರಕಿಹೊಳಿ ಬಾಮೈದ ಮಂಜುನಾತ್ ಮನೆ ಮೇಲೆ ಇಡಿ ದಾಳಿ
  • ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತರಾಗಿರುವ ಮಂಜುನಾಥ್
  • ಮಂಜುನಾಥ್ ಸ್ನೇಹಿತೆ ಯಮುನಾ ತಂಗಿದ್ದ ಮೈಸೂರಿನ ಮನೆ ಮೇಲೂ ಇಡಿ ಪರಿಶೀಲನೆ

ಮೈಸೂರು, (ಜೂನ್ 24): ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಂಜುನಾಥಗೆ ಸೇರಿದ ಬೆಳಗಾವಿ, ಬೆಂಗಳೂರು ಸೇರಿದಂತೆ ಎಲ್ಲಾ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೈಸೂರಿನಲ್ಲಿ ಮಂಜುನಾಥ್ ಅವರ ಸ್ನೇಹಿತಯ ಮನೆ ಮೇಲೆ ದಾಳಿಯಾಗಿದೆ. ಹೌದು…ಮಂಜುನಾಥ್ ಹೆಸರಿನಲ್ಲಿರುವ ಮನೆಯಲ್ಲಿ ಅವರ ಗೆಳತಿ ವಾಸ ಮಾಡುತ್ತಿದ್ದು, ಇದೀಗ ಈ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಮಂಜುನಾಥ್ ಆಪ್ತ ಸ್ನೇಹಿತೆ ಯಮುನಾ, ಆಕೆಯ ತಾಯಿ ವಾಸವಿದ್ದು, ಮಂಜುನಾಥ್​ಗೆ ಸೇರಿದ ಮನೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 24, 2026 03:18 PM

Follow Us