AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ

ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ

ದಿಲೀಪ್​, ಚೌಡಹಳ್ಳಿ
| Edited By: ವಿವೇಕ ಬಿರಾದಾರ|

Updated on: Jul 07, 2024 | 8:23 AM

Share

ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ, ಸಫಾರಿ ವೇಳೆ ಅದೆಷ್ಟೊ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿಗೆ ತೆರಳಿದ ವೇಳೆ ಪ್ರವಾಸಿಗರಿಗೆ ಶಾಕ್​ ಕಾದಿತ್ತು.

ಮೈಸೂರು, ಜುಲೈ 07: ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಸಫಾರಿ ಮಾಡುತ್ತಿರುವಾಗ ಪ್ರಾಣಿಗಳು ಕಂಡರಂತೂ ಪೋಟೋ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರೆಗೂ ಸಮಾಧಾನ ಆಗಲ್ಲ. ಆದರೆ, ಸಫಾರಿ ವೇಳೆ ಪ್ರಾಣಿಗಳು ಅಟ್ಯಾಕ್​ ಮಾಡಿದರೆ ಏನು ಗತಿ? ಹೌದು, ಸಫಾರಿ ವೇಳೆ ಅದೆಷ್ಟೋ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಇದೇರೀತಿ, ಹೆಚ್.ಡಿ ಕೋಟೆ (HD Kote) ತಾಲೂಕಿನ ದಮ್ಮನಕಟ್ಟೆ (Dumannakatte) ಸಫಾರಿಗೆ (Safari) ತೆರಳಿದ ವೇಳೆ ಆನೆ ಆಟ್ಯಾಕ್ ಮಾಡಿದೆ, ಮತ್ತೊಂದು ಕಡೆ ಎರಡೆರಡು ಹುಲಿಗಳ ದರ್ಶನವಾಗಿದೆ. ಪ್ರವಾಸಿಗರು ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ತೆರಳಿದರು. ಈ ವೇಳೆ ಟೆಂಪಲ್‌ ಟ್ಯಾಂಕ್ ಬಳಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಚಾಲಕ ಒಂಟಿ‌ ಸಲಗ ಕಂಡು ಸಫಾರಿ ವಾಹನ ನಿಲ್ಲಿಸಿದ್ದಾನೆ. ಈ ವೇಳೆ ಗಜರಾಜ ಏಕಾಏಕಿ ಆಟ್ಯಾಕ್ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇದೇ ವೇಳೆ ಎರಡು ಹುಲಿಗಳ ದರ್ಶನ ಕೂಡ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More