ದೇಶದ ನಾನಾಭಾಗಗಳಲ್ಲಿರುವ ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಯುತ್ತಿರೋದು ಸರಿಯಲ್ಲ: ರಾಹುಲ್ ಗಾಂಧಿ
ನಮ್ಮ ಸಮಾಜವನ್ನು ಒಡೆಯುವುದು ಮತ್ತು ಸಮುದಾಯಗಳ ನಡುವೆ ಹಗೆ ಹುಟ್ಟಿಸುವುದಷ್ಟೇ ಉಗ್ರರ ಉದ್ದೇಶವಾಗಿದೆ, ಅವರ ಉದ್ದೇಶಗಳನ್ನು ಪರಾಭವಗೊಳಿಸಲು ಭಾರತೀಯರೆಲ್ಲ ಒಗ್ಗಟ್ಟಾಗಬೇಕಿದೆ, ದೇಶದ ನಾನಾ ಭಾಗಗಳಲ್ಲಿರುವ ಅಮಾಯಕ ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಅತ್ಯಂತ ದುಃಖಕರ ಸಂಗತಿ, ಹೀಗೆ ಮಾಡೋದು ಬೇಡ ಎಂದು ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಶ್ರೀನಗರ, ಏಪ್ರಿಲ್ 25: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ (Rahul Gandhi) ಶ್ರೀನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದೆ, ಉಳಿದವರು ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಹೋಗಿರುವುದರಿಂದ ಭೇಟಿಯಾಗುವುದು ಸಾಧ್ಯವಾಗಲಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಾಗರಿಕ ಈ ಭಯಾನಕ ದಾಳಿಯನ್ನು ಖಂಡಿಸಿದ್ದಾನೆ ಮತ್ತು ಇಡೀ ರಾಜ್ಯ ದೇಶಕ್ಕೆ ಬೆಂಬಲ ಸೂಚಿಸಿದೆ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ತಮ್ಮ ಪಕ್ಷ ಅದರ ಜೊತೆ ಇರುತ್ತದೆ ಎಂದು ಸಂಸದ ಹೇಳಿದರು.
ಇದನ್ನೂ ಓದಿ: Pahalgam Terrorist Attack: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ