AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ಅಮಾನತು ವಾಪಸ್ಸು ಪಡೆಯುವಂತೆ ಸ್ಪೀಕರ್ ಹಾಗೂ ಕಾನೂನು ಸಚಿವರಿಗೆ ಮನವಿ ಮಾಡಿದ್ದೇವೆ: ಅಶೋಕ

ಶಾಸಕರ ಅಮಾನತು ವಾಪಸ್ಸು ಪಡೆಯುವಂತೆ ಸ್ಪೀಕರ್ ಹಾಗೂ ಕಾನೂನು ಸಚಿವರಿಗೆ ಮನವಿ ಮಾಡಿದ್ದೇವೆ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 25, 2025 | 3:41 PM

ಅಧಿವೇಶನದಲ್ಲಿ ಬಿಜೆಪಿ ಶಾಸಕರಿಂದ ಏನಾದರೂ ಲೋಪ ಆಗಿದ್ದರೆ ಅದನ್ನು ಒಪ್ಪಿಕೊಳ್ಳಲು ತಾವು ಸಿದ್ಧರಿರೋದಾಗಿ ಹೇಳಿದ ಅಶೋಕ ಸದನದೊಳಗೆ ಇದಕ್ಕೆ ಮೊದಲು ಸಹ ಅನೇಕ ಸಲ ಧರಣಿ ಮಾಡಿದ್ದೇವೆ, ಕಾಂಗ್ರೆಸ್ ಶಾಸಕರು ಮೈಕ್ ಕಿತ್ತಾಡಿ ಸ್ಪೀಕರ್ ಅವರನ್ನು ಎಳೆದಾಡಿದ ನಿದರ್ಶನಗಳೂ ಇವೆ, ಅವರಿಗೆ ಆಗ ಅನ್ವಯಿಸದ ಕಾನೂನು ಈಗ ನಮಗ್ಯಾಕೆ ಎಂದು ಅಶೋಕ ಪ್ರಶ್ನಿಸಿದರು.

ಬೆಂಗಳೂರು, ಏಪ್ರಿಲ್ 25: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅಮಾನತು ಮಾಡಿರೋದು ಅಸಂವಿಧಾನಿಕ, ಅದೇಶವನ್ನು ವಾಪಸ್ಸು ಪಡೆಯುವಂತೆ ಸ್ಪೀಕರ್ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ (HK Patil ) ಅವರೊಂದಿಗೆ ಮಾತಾಡಿದ್ದೇನೆ ಎಂದು ಹೇಳಿದರು. ಗಲಾಟೆ ಅಧಿವೇಶನದಲ್ಲಿ ನಡೆದಿರೋದು ಮತ್ತು ಸ್ಪೀಕರ್ ಅವರ ಶಿಕ್ಷೆ ಅಧಿವೇಶನದೊಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು, ಆದರೆ ಅವರು, ಕಮಿಟಿ ಮೀಟಿಂಗ್ ಗಳಲ್ಲಿ ಶಾಸಕರು ಭಾಗವಹಿಸದಂತೆ ನಿರ್ಬಂಧ ಹೇರಿದ್ದಾರೆ ಮತ್ತು ಟಿಎ ಮತ್ತು ಡಿಎಯನ್ನೂ ನಿಲ್ಲಿಸಿದ್ದಾರೆ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:  ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕ ವರದಿ ರೂಪಿಸಿ: ಅಶೋಕ್ ಆಗ್ರಹ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ