ಕ್ಯಾಪ್ಟನ್ ಆಗಿರುವ ಹಂಸಾ ಅವರಿಗೆ ಕಾಟ ಕೊಡಬೇಕು ಎಂಬ ಉದ್ದೇಶದಿಂದಲೇ ಜಗದೀಶ್ ಅವರು ಇಲ್ಲಸಲ್ಲದ ಡಿಮ್ಯಾಂಡ್ ಮಾಡುತ್ತಿದ್ದಾರೆ. ‘ಸಾಯಂಕಾಲ ಪನೀರ್ ಬಟರ್ ಮಸಾಲಾ ಮತ್ತು ರೋಟಿ ಬೇಕು’ ಅಂತ ಜಗದೀಶ್ ಕೂಗಿ ಹೇಳಿದ್ದಾರೆ. ‘ಈ ಯಪ್ಪ ಸುಮ್ಮನೇ ಫೋಟೇಜ್ ತಗೋಳೋಕೆ ಏನೋ ಬೊಗಳುತ್ತಾ ಇರುತ್ತಾನೆ’ ಎಂದು ಹಂಸಾ ಗೊಣಗಿದ್ದಾರೆ. ಜಗದೀಶ್ ಮಾತಿನಿಂದ ಭವ್ಯಾಗೂ ಕಿರಿಕಿರಿ ಆಗಿದೆ. ‘ಊಟ ಮಾಡುವಾಗಲಾದ್ರೂ ನೆಮ್ಮದಿ ಕೊಡಿ’ ಎಂದು ಭವ್ಯಾ ಅವರು ಧ್ವನಿ ಏರಿಸಿದ್ದಾರೆ. ಈ ಮಾತಿನಿಂದ ಜಗಳ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.