ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಕೇಳಿದಾಗ ರಾಜಣ್ಣ, ವರಿಷ್ಠರು ತೆಪ್ಪಗಿರುವಂತೆ ಹೇಳಿದ್ದಾರೆ ಎಂದರು!

ಎಲ್ಲರಿಗೂ ಗೊತ್ತಿರುವ ಹಾಗೆ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಚರ್ಚೆ ರಾಜಣ್ಣ ಅವರಿಂದಲೇ ಶುರುವಾಗುತಿತ್ತು. ಶಿವಕುಮಾರ್ ಹೇಳಿಕೆ ನೀಡಕೂಡದೆಂದು ಎಚ್ಚರಿಸಿದ್ದರೂ ರಾಜಣ್ಣ ಅದನ್ನು ನಿಲ್ಲಿಸಿರಲಿಲ್ಲ. ಪ್ರಾಯಶಃ ಮೊನ್ನೆ ದೆಹಲಿಗೆ ಹೋದಾಗ ಶಿವಕುಮಾರ್ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿರಬಹುದು. ಆವಾಗಲೇ ರಾಜಣ್ಣಗೆ ಸಂದೇಶ ರವಾನೆಯಾಗಿರುತ್ತದೆ.

ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಕೇಳಿದಾಗ ರಾಜಣ್ಣ, ವರಿಷ್ಠರು ತೆಪ್ಪಗಿರುವಂತೆ ಹೇಳಿದ್ದಾರೆ ಎಂದರು!
|

Updated on: Jul 08, 2024 | 5:06 PM

ಬೆಂಗಳೂರು: ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಬಾರದು ಅಂತ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾಟಿ ಬೀಸಿದ್ದು ಸಹಕಾರ ಸಚಿವ ಕೆ ಎನ್ ರಾಜಣ್ಣ ಮೇಲೆ ಪರಿಣಾಮ ಬೀರಿದಂತಿದೆ. ಇವತ್ತು ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡುವಾಗ ಖುದ್ದು ಅವರೇ ವಿಷಯವನ್ನು ಬಹಿರಂಗ ಪಡಿಸಿದರು. ಕಳೆದ ಸಲ ಸಿದ್ದರಾಮಯ್ಯ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷ ಸಿದ್ದರಾಮೋತ್ಸವ ಅಂತ ಅಹಿಂದ ಸಮಾವೇಶ ನಡೆಸಲಾಗಿತ್ತು. ಈ ಬಾರಿಯೂ ನಡೆಯುತ್ತಾ ಸರ್ ಅಂತ ಕೇಳಿದಾಗ ರಾಜಣ್ಣ, ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಅದನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದೆಯಾ ಇಲ್ಲವಾ ಅಂತಲೂ ಗೊತ್ತಿಲ್ಲ, ಮಾಹಿತಿ ಸಿಕ್ಕಾಗ ತಿಳಿಸುತ್ತೇನೆ ಅಂತ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳು ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಮಾತುಕತೆ ನಡೆದಿದೆಯಾ ಅಂತ ಕೇಳಿದಾಗ ಆ ವಿಷಯದ ಬಗ್ಗೆ ಬಹಿರಂಗವಾಗಿ ಮತಾಡಿ ಗೊಂದಲ ಸೃಷ್ಟಿಸಬಾರದು ಅಂತ ಹೈಕಮಾಂಡ್ ಹೇಳಿದೆ, ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ತಾವೆಲ್ಲ ಅದಕ್ಕೆ ಬದ್ಧರಾಗಿರುವುದಾಗಿ ರಾಜಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!

Follow us