AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು

‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು

ಮಂಜುನಾಥ ಕೆಬಿ
| Edited By: |

Updated on: Jul 18, 2026 | 7:36 PM

Share

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪತ್ನಿ ಚೆನ್ನಮ್ಮ ನಿಧನಕ್ಕೆ ಕುಟುಂಬದಲ್ಲಿ ಆಳವಾದ ದುಃಖ ಆವರಿಸಿದೆ. ಅವರ ಸಹೋದರ ತಮ್ಮ ನೋವನ್ನು ತೋಡಿಕೊಂಡಿದ್ದು, ಚೆನ್ನಮ್ಮ ಅವರನ್ನು ದೇವರು ಎಂದಿದ್ದಾರೆ. ರಾಜಕೀಯ ಎತ್ತರದಲ್ಲಿದ್ದರೂ ಚೆನ್ನಮ್ಮ ಎಂದಿಗೂ ತುಂಬಿದ ಕೊಡದಂತೆ ಗಂಭೀರವಾಗಿ, ಸರಳವಾಗಿ ಮತ್ತು ನಿಗರ್ವಿಯಾಗಿ ಜೀವನ ನಡೆಸಿದ್ದರು.

ಹಾಸನ, ಜುಲೈ 18: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಕುಟುಂಬದ ಸದಸ್ಯರಿಗೆ ಆಘಾತ ಉಂಟಾಗಿದೆ. ಚೆನ್ನಮ್ಮ ಅವರ ಸಹೋದರ ವಿಶ್ವನಾಥ್, ಅಕ್ಕನ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದು, ‘‘ಅವರು ನಮ್ಮ ಕುಟುಂಬಕ್ಕೆ ದೇವರಾಗಿದ್ದರು. ನಮ್ಮನ್ನು ಸಾಕಿ, ಬೆಳೆಸಿದ್ದು ಅವರೇ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಮ್ಮ ವಹಿಸಿಕೊಂಡಿದ್ದರು. ನಾವು ಅವರ ಹಾಕಿದ ಗೆರೆ ದಾಟುತ್ತಿರಲಿಲ್ಲ. ಅವರು ನಮಗೆ ದೇವರು. ಅವರ ನೆರವಿನಿಂದಲೇ ನಾವು ಉತ್ತಮ ಉದ್ಯೋಗ ಪಡೆದು ಗೌರವಯುತ ಜೀವನ ನಡೆಸಲು ಸಾಧ್ಯವಾಯಿತು. ಪತಿ ಪ್ರಧಾನಿ, ಪುತ್ರ ಮುಖ್ಯಮಂತ್ರಿ ಮತ್ತು ಸಚಿವರಾದರು, ಅಳಿಯ ದೊಡ್ಡ ವೈದ್ಯರಾದರೂ ಚೆನ್ನಮ್ಮ ಅವರು ಎಂದಿಗೂ ಸರಳತೆ ಕಾಯ್ದುಕೊಂಡಿದ್ದರು. ಯಾವುದೇ ಅಹಂ ಇಲ್ಲದೆ ಜೀವನ ಸಾಗಿಸಿದರು’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us