Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು, ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಕಿಮ್ಸ್

ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು, ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಕಿಮ್ಸ್

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:Mar 28, 2025 | 8:13 PM

ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಸಿಲುಕಿಕೊಂಡಿದ್ದರು. ಈ ವೇಳೆ, ಮೊಹಮದ್ ಸಮಿ, ಅತಿಕ್ ಮತ್ತು ಕಪೀಲ್ ಎಂಬ ಮೂವರು ಯುವಕರು ತಮ್ಮ ಧೈರ್ಯದಿಂದ ನಾಲ್ವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರ ಮಾನವೀಯತೆಗೆ ಗಾಯಾಳುಗಳ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಹುಬ್ಬಳ್ಳಿ, ಮಾರ್ಚ್​ 28: ರಸ್ತೆ ಅಪಘತಾದಲ್ಲಿ ಗಾಯಗೊಂಡಿದ್ದವರ ಪ್ರಾಣ ಉಳಿಸುವ ಮೂಲಕ ಮೂಲಕ ಮೂವರು ಯುವಕರು ಮಾನವೀಯತೆ ಮೆರೆದಿದ್ದಾರೆ. ಸಂಜಯ್, ಸಂತೋಷ್ ಗೌರೀಶ್ ಹಾಗೂ ಆಲರೀಕ್ ಗಾಯಗೊಂಡವರು. ಮೊಹಮದ್ ಸಮಿ, ಅತಿಕ್ ಹಾಗೂ ಕಪೀಲ್​ ನಾಲ್ವರ ಪ್ರಾಣ ಉಳಿಸಿದವರು. ಗಾಯಗೊಂಡವರನ್ನು ಹುಬ್ಬಳ್ಳಿಯ (Hubballi) ಕಿಮ್ಸ್​ ಆಸ್ಪತ್ರೆಗೆ (Kims Hospital) ದಾಖಲಿಸಲಾಗಿದೆ. ಶುಕ್ರವಾರ (ಮಾ.28) ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹುಬ್ಬಳ್ಳಿಯಿಂದ ಹೊನ್ನಾವರಕ್ಕೆ ಹೊರಟಿದ್ದ ಗೂಡ್ಸ್ ವಾಹನ ಅಂಚಟಗೇರಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿ ನಾಲ್ವರೂ ಸಿಲುಕಿ ಹಾಕಿಕೊಂಡಿದ್ದರು.

ಈ ವೇಳೆ, ಇದೇ ದಾರಿಯಲ್ಲಿ ಹೊರಟಿದ್ದ ಮೊಹಮದ್ ಸಮಿ, ಅತಿಕ್ ಹಾಗೂ ಕಪೀಲ್​ ನಾಲ್ವರು ಯುವಕರು ಅವರನ್ನು ವಾಹನದೊಳಗಿನಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಸಕಾಲಕ್ಕೆ ಆಂಬ್ಯುಲೆನ್ಸ್​ ಬಾರದ ಹಿನ್ನೆಲೆಯಲ್ಲಿ ಕೊನೆಗೆ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಪ್ರಾಣ ಉಳಿಸಿದ ಮೂವರು ಯುವಕರನ್ನು ತಬ್ಬಿಕೊಂಡು ಗಾಯಗೊಂಡವರ ಪೋಷಕರು ಕಣ್ಣೀರು ಹಾಕಿ, ಧನ್ಯವಾದ ತಿಳಿಸಿದರು. ಈ ಮೂಲಕ ಕಿಮ್ಸ್ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

Published on: Mar 28, 2025 08:12 PM