AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನೊಳಗೆ ವಿಜಯಲಕ್ಷ್ಮಿ, ಪವಿತ್ರಾ ಗೌಡ ನಡುವಿನ ವರ್ತನೆಯಲ್ಲಿ ಎಷ್ಟೊಂದು ವ್ಯತ್ಯಾಸ

ಜೈಲಿನೊಳಗೆ ವಿಜಯಲಕ್ಷ್ಮಿ, ಪವಿತ್ರಾ ಗೌಡ ನಡುವಿನ ವರ್ತನೆಯಲ್ಲಿ ಎಷ್ಟೊಂದು ವ್ಯತ್ಯಾಸ

ರಾಮು, ಆನೇಕಲ್​
| Edited By: |

Updated on: Aug 19, 2024 | 7:30 PM

Share

ದರ್ಶನ್​ ಅವರನ್ನು ಮಾತನಾಡಿಸಲು ವಿಜಯಲಕ್ಷ್ಮಿ ಇಂದು (ಆಗಸ್ಟ್​​ 19) ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಇದೇ ವೇಳೆ ಜೈಲಿನಲ್ಲಿ ಇರುವವರಿಗೆ ರಾಖಿ ಕಟ್ಟಲು ಮಹಿಳೆಯರು ತೆರಳಿದ್ದರು. ವಿಚಾರಣಾಧೀನ ಖೈದಿ ಆಗಿರುವ ಪವಿತ್ರಾ ಗೌಡ ಅವರು ರಾಖಿ ಕಟ್ಟಿಸಿಕೊಂಡಿಲ್ಲ. ರಾಖಿ ಕಟ್ಟಲು ಹೋದ ಮಹಿಳೆಯು ಆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ..

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಜೈಲಿನಲ್ಲಿ ಇರುವ ಎಲ್ಲರಿಗೂ ರಾಖಿ ಕಟ್ಟಲು ಕೆಲವು ಮಹಿಳೆಯರು ಇಂದು (ಆ.19) ಪರಪ್ಪನ ಅಗ್ರಹಾರಕ್ಕೆ ತೆರಳಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರು ರಾಖಿ ಕಟ್ಟಿಸಿಕೊಂಡಿಲ್ಲ. ಆದರೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಬಹಳ ವಿನಯದಿಂದ ರಾಖಿ ಕಟ್ಟಿಸಿಕೊಂಡರು ಎಂದು ಯುವತಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಪವಿತ್ರಾ ಗೌಡ ಅವರು ಕೊಠಡಿಯಿಂದ ಹೊರಗೆ ಬರಲಿಲ್ಲ. ನಾವು ಕೂಡ ಒತ್ತಾಯ ಮಾಡಲಿಲ್ಲ. ವಿಜಯಲಕ್ಷ್ಮಿ ಅವರು ತುಂಬ ಚೆನ್ನಾಗಿ ಪ್ರತಿಕ್ರಿಯಿಸಿದರು’ ಎಂದು ಯುವತಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.