ಶಿವಕುಮಾರ್ ಜೊತೆ ರಾಜಕೀಯೇತರ ಸಂಬಂಧವಿದೆ, ಪ್ರತಿಸಲ ಆತ್ಮೀಯತೆಯಿಂದ ಮಾತಾಡುತ್ತಾರೆ: ರೇಣುಕಾಚಾರ್ಯ
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ರಾಜಕೀಯಕ್ಕೆ ಮಿಗಿಲಾದ ಸಂಬಂಧವಿದೆ, ಕರೆ ಮಾಡಿದಾಗೆಲ್ಲ ಸ್ವೀಕರಿಸಿ ಅತ್ಮೀಯವಾಗಿ ಮಾತಾಡುತ್ತಾರೆ, ಇವತ್ತು ಕೂಡ ತನ್ನ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ರೇಣುಕಾಚಾರ್ಯ ಹೇಳಿದರು. ಅದರೆ ಅವರು ಶಿವಕುಮಾರ್ರನ್ನು ಭೇಟಿಯಾದಾಗಲೆಲ್ಲ ಬಿಜೆಪಿ ತೊರೆಯಲಿದ್ದಾರೆಯೇ ಎಂಬ ಗುಮಾನಿ ಹುಟ್ಟಿಕೊಳ್ಳುತ್ತದೆ.
ಬೆಂಗಳೂರು, 14 ಮಾರ್ಚ್: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಕ್ಷೇತ್ರದಲ್ಲಿ ನಿಂತುಹೋಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಸುಮಾರು 150 ಕೊಳವೆಬಾವಿಗಳು ಮತ್ತು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶುರುವಾದ ಹೊನ್ನಾಳಿ-ನ್ಯಾಮತಿ ಕ್ಷೇತ್ರದಲ್ಲಿರುವ ಕೆರೆತುಂಬಿಸುವ ಕೆಲಸ ನೆನೆಗುದಿಗೆ ಬಿದ್ದಿದೆ, ಅವುಗಳನ್ನು ಪೂರ್ಣಗಳಿಸಲು ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದ್ದಾಗಿ ರೇಣುಕಾಚಾರ್ಯ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು
Published on: Mar 14, 2025 02:38 PM
Loading...
Unable to load recommendations.
Follow Us