ಧಾರವಾಡ: ಮಳೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ; ತಬ್ಬಿಬ್ಬಾದ ಜನ

|

Updated on: Jun 07, 2024 | 6:25 PM

ಮುಂದುವರೆಯುತ್ತಿರುವ ಜಗತ್ತಿನಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಕಣ್ಣಿಗೆ ಬಿಳುತ್ತವೆ. ಅದರಲ್ಲೂ ರೀಲ್ಸ್ ನೆಪದಲ್ಲಿ ಬಸ್​ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಪಿಚೇಷ್ಟೇ ಮಾಡುವವರಿಗೇನು ಕಮ್ಮಿ ಇಲ್ಲ. ಆದರೆ, ಇಲ್ಲೊಂದು ಧಾರವಾಡ ನಗರದ ಸಿಬಿಟಿ ಬಸ್​ ನಿಲ್ದಾಣದ ಮುಂಭಾಗದಲ್ಲಿ ವಿಚಿತ್ರವೆಂಬಂತೆ ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ.

ಧಾರವಾಡ, ಜೂ.07: ಮುಂದುವರೆಯುತ್ತಿರುವ ಜಗತ್ತಿನಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಕಣ್ಣಿಗೆ ಬಿಳುತ್ತವೆ. ಅದರಲ್ಲೂ ರೀಲ್ಸ್ ನೆಪದಲ್ಲಿ ಬಸ್​ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಪಿಚೇಷ್ಟೇ ಮಾಡುವವರಿಗೇನು ಕಮ್ಮಿ ಇಲ್ಲ. ಆದರೆ, ಇಲ್ಲೊಂದು ಧಾರವಾಡ(Dharwad) ನಗರದ ಸಿಬಿಟಿ ಬಸ್​ ನಿಲ್ದಾಣದ ಮುಂಭಾಗದಲ್ಲಿ ವಿಚಿತ್ರವೆಂಬಂತೆ ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ. ಹೌದು, ಇಂದು(ಜೂ.07) ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ. ನಡು ರಸ್ತೆಯಲ್ಲಿಯೇ ಕಣ್ಮುಚ್ಚಿ ಕುಳಿತು ಧ್ಯಾನಕ್ಕೆ ಜಾರಿದ ವೃದ್ಧನನ್ನು ಕಂಡು ಜನರು ತಬ್ಬಿಬ್ಬಾಗಿದ್ದಾರೆ. ಹಿರಿಯ ಜೀವಿ ತಪಸ್ಸು ಮಾಡುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on