ಬೆಂಗಳೂರಿನಲ್ಲಿ ಪ್ರತಿಭಟನೆ ಹೆಸರಲ್ಲಿ ಹೋಟೆಲ್​ಗೆ ನುಗ್ಗಿ ದಾಂಧಲೆ; ವಿಡಿಯೋ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 26, 2023 | 2:44 PM

ಬಂದ್​ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಇಬ್ಬರಿಂದ ಜಯನಗರದಲ್ಲಿರುವ ಉಡುಪಿ ಹಬ್​ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್​ ಮಾಲೀಕರು ದೂರು ನೀಡಿದ್ದಾರೆ.

ಬೆಂಗಳೂರು, ಸೆ.26: ಕಾವೇರಿ ನದಿ(Cauvery River) ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್​ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಇಂದು(ಸೆ.26) ಪ್ರತಿಭಟನೆ ನಡೆಯುತ್ತಿದೆ. ಅದರಂತೆ ಇದೀಗ ಹೋರಾಟದ ಹೆಸರಿನಲ್ಲಿ ಹೋಟೆಲ್​ಗೆ ನುಗ್ಗಿ ದಾಂಧಲೆ ಓರ್ವ ವ್ಯಕ್ತಿ ಧಾಂದಲೆ ಮಾಡಿದ್ದಾನೆ. ಹೌದು, ಬಂದ್​ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಇಬ್ಬರಿಂದ ಜಯನಗರ(Jayanagara)ದಲ್ಲಿರುವ ಉಡುಪಿ ಹಬ್​ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್​ ಮಾಲೀಕರು ದೂರು ನೀಡಿದ್ದಾರೆ. ಅವರ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಇದೀಗ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ವೇಳೆ ಇವರು ಜಯನಗರ ಎಂಎಲ್​ಎ ರಾಮಮೂರ್ತಿ ಶಿಷ್ಯರೆಂದು ತಿಳಿದು ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ