AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚುತ್ತಿರುವ ಹೃದಯಾಘಾತಗಳು; ಮೈಸೂರು ಜಯದೇವ ಹೃದ್ರೋಗ ಕೇಂದ್ರದಲ್ಲಿ ತಪಾಸಣೆಗೆ ನೂಕುನುಗ್ಗಲು!

ಹೆಚ್ಚುತ್ತಿರುವ ಹೃದಯಾಘಾತಗಳು; ಮೈಸೂರು ಜಯದೇವ ಹೃದ್ರೋಗ ಕೇಂದ್ರದಲ್ಲಿ ತಪಾಸಣೆಗೆ ನೂಕುನುಗ್ಗಲು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 10, 2025 | 12:27 PM

Share

ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತಗಳು ಸಂಭವಿಸಿರುವುದಕ್ಕೆ ಕೋವಿಡ್ ಲಸಿಕೆಗಳೂ ಕಾರಣವಾಗಿರಬಹುದೆಂದು ಕೆಲ ವೈದ್ಯರು ಹೇಳುತ್ತಾರೆ, ಅದರೆ ಆ ಸಂಗತಿ ಅಧ್ಯಯನಗಳಿಂದ ದೃಢಪಟ್ಟಿಲ್ಲ. ತಜ್ಞರ ಪ್ರಕಾರ ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಖಿನ್ನತೆ ಮೊದಲಾದವು ಹೃದಯದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗಿರುವುದು ಕೂಡ ಹೃದ್ರೋಗ ಮತ್ತು ಹೃದಯಾಘಾತಗಳಿಗೆ ಕಾರಣವಾಗುತ್ತಿದೆ.

ಮೈಸೂರು, ಜುಲೈ 10: ಹೃದಯಾಘಾತದಿಂದ ಕೇವಲ ಹಾಸನ ಮಾತ್ರವಲ್ಲ, ಬೇರ ಜಿಲ್ಲೆಗಳಲ್ಲೂ ಜನ ಮರಣವನ್ನುಪ್ಪುತ್ತಿದ್ದಾರೆ. ಈ ವಿದ್ಯಮಾನ ಜನರ ನಿದ್ದೆಗೆಡಿಸಿದೆ ಮತ್ತು ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ನಗರದ ಜಯದೇವ ಹೃದ್ರೋಗ ಕೇಂದ್ರದಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯವಿದು. ಈ ಗುಂಪಿನಲ್ಲಿ ಎಲ್ಲ ವಯೋಮಾನಗಳ ಜನರಿದ್ದಾರೆ. ಎಲ್ಲರಿಗೂ ತಪಾಸಣೆ ಮಾಡಿಸಿಕೊಳ್ಳುವ ಆತುರ. 40 ವರ್ಷದೊಳಗಿನ ಜನರಲ್ಲಿ ಹೃದಯಾಘಾತಗಳ ಪ್ರಮಾಣ ಶೇಕಡ 50ರಷ್ಟು ಹೆಚ್ಚಿರುವುದು ಜನರಲ್ಲಿ ಆತಂಕಕ್ಕೆ ಕಾಣವಾಗಿದೆ. ಹೃದ್ರೋಗಗಳ ಪರೀಕ್ಷಣೆಗೆ ಅವಶ್ಯವಾಗಿರುವ ಈಸಿಜಿ, ಆ್ಯಂಜಿಯೋಗ್ರಾಮ್, ಡಾಪ್ಲರ್ ಟೆಸ್ಟ್, ಈಟಿಟಿ, ಎಂಆರ್​ಐ, ಸಿಟಿ ಸ್ಕ್ಯಾನ್ ಗಳ ರಿಪೋರ್ಟ್ ಗಳೊಂದಿಗೆ ಜನ ಹೃದಯ ತಜ್ಞರ ಬಳಿ ಹೋಗುತ್ತಿರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ:   ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ