![Coronavirus](https://images.tv9kannada.com/wp-content/uploads/2023/12/coronavirus-2.jpg)
Coronavirus
2019ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ನಲ್ಲಿ ಪತ್ತೆಯಾಗುವ ಮೂಲಕ ಈ ವೈರಸ್ ಇಡೀ ವಿಶ್ವವನ್ನೇ ಆವರಿಸಿಕೊಂಡಿತ್ತು. ಇಡೀ ವಿಶ್ವವೇ ಲಾಕ್ ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಇಷ್ಟೆಲ್ಲ ಭೀಕರತೆಯ ನಡುವೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು 2020ರ ಮಾರ್ಚ್ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು.ವಿಶ್ವದಲ್ಲೇ ಇದುವರೆಗೆ 70 ಕೋಟಿ ಪ್ರಕರಣ ದಾಖಲಾಗಿದ್ದು, ಸುಮಾರು 70ಲಕ್ಷ ಜನರನ್ನು ಬಲಿಪಡೆದುಕೊಂಡಿದೆ. ಭಾರತದಲ್ಲಿ ನಾಲ್ಕೂವರೆ ಕೋಟಿ ಪ್ರಕರಣಗಳು ದಾಖಲಾಗಿದೆ. 5.33 ಲಕ್ಷ ಮಂದಿ ಅಸುನೀಗಿದ್ದಾರೆ. ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ. ಇದು ಸಾಮಾನ್ಯ ಶೀತದಿಂದ ಪ್ರಾರಂಭವಾಗಿ ಶ್ವಾಸಕೋಶದ ಸೋಂಕನ್ನು ಉಂಟು ಮಾಡಿ ಪ್ರಾಣಕ್ಕೆ ಕಂಟಕವಾಗುತ್ತದೆ. ಇದೀಗಾ ಮತ್ತೆ ಇದರ ಹಾವಳಿ ಪ್ರಾರಂಭವಾಗಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ.
ಒಂಬತ್ತಲ್ಲ, 38 ಲಕ್ಷ ಕೋಟಿ ರೂ ನಷ್ಟ ಕಂಡ ಷೇರುಪೇಟೆ; ಮಾರುಕಟ್ಟೆ ನಡುಗಿದ ನಾಲ್ಕು ಸಂದರ್ಭಗಳಿವು
Stock market crashes from Harshad Mehta to Covid crisis: ಇವತ್ತು ಷೇರು ಮಾರುಕಟ್ಟೆ ಗಡಗಡ ನಡುಗಿ ಹೋಗಿದೆ. ಇಂಟ್ರಾಡೇ ಟ್ರೇಡಿಂಗ್ನಲ್ಲಿ 38 ಲಕ್ಷ ಕೋಟಿ ರೂ ನಷ್ಟವಾಗಿರುವ ಅಂದಾಜು ಇದೆ. ಭಾರತದ ಷೇರು ಮಾರುಕಟ್ಟೆ ಕಂಡ ದೊಡ್ಡ ಮಟ್ಟದ ಕುಸಿತಗಳಲ್ಲಿ ಇದೂ ಒಂದು. ಈ ಹಿಂದೆ ಐದಾರು ಬಾರಿ ಈ ರೀತಿ ವಿಪ್ಲವಗಳಾಗಿವೆ. ಹರ್ಷದ್ ಮೆಹ್ತಾ ಹಗರಣದಿಂದ ಹಿಡಿದು ಕೋವಿಡ್ವರೆಗೂ ವಿವಿಧ ಸಂದರ್ಭಗಳಲ್ಲಿ ಮಾರುಕಟ್ಟೆ ಕುಸಿತ ಕಂಡಿದೆ.
- Vijaya Sarathy SN
- Updated on: Jun 4, 2024
- 3:02 pm
Covaxin: ಕೊವ್ಯಾಕ್ಸಿನ್ ಅಡ್ಡಪರಿಣಾಮದ ಅಧ್ಯಯನದ ವಿರುದ್ಧ ಅಸಮಾಧಾನ; ಕ್ಷಮೆಗೆ ಆಗ್ರಹಿಸಿದ ಐಸಿಎಂಆರ್
ಕೊವ್ಯಾಕ್ಸಿನ್ ಅಡ್ಡಪರಿಣಾಮ ಅಧ್ಯಯನದ ಬಗ್ಗೆ ಅಧ್ಯಯನ ನಡೆಸಿದ ಬನಾರಸ್ ಹಿಂದೂ ಯುನಿವರ್ಸಿಟಿ (BHU) ವಿರುದ್ಧ ಐಸಿಎಂಆರ್ ಅಸಮಾಧಾನ ವ್ಯಕ್ತಪಡಿಸಿದೆ. ಇದೊಂದು ಕಳಪೆ ಅಧ್ಯಯನ ಎಂದಿರುವ ಐಸಿಎಂಆರ್ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದೆ.
- Sushma Chakre
- Updated on: May 20, 2024
- 5:42 pm
ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ; ವಾರಕ್ಕೆ 26 ಸಾವಿರ ಕೇಸ್ ಪತ್ತೆ
ಸಿಂಗಾಪುರದಲ್ಲಿ ಮಹಾಮಾರಿ ಕೊರೊನಾ ಮತ್ತೆ ಆತಂಕ ಸೃಷ್ಟಿಸಿದೆ. ಕೇವಲ ಒಂದು ವಾರದಲ್ಲಿ 26 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಮಾಸ್ಕ್ ಧರಿಸುವಂತೆ ಆದೇಶ ನೀಡಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ.
- Harish GR
- Updated on: May 19, 2024
- 7:50 am
Coronavirus: ಭಾರತದಲ್ಲಿ ಮತ್ತೆ ಕೊರೊನಾ ಆತಂಕ, ಮಹಾರಾಷ್ಟ್ರದಲ್ಲಿ 19 ಪ್ರಕರಣಗಳು ಪತ್ತೆ
ಭಾರತದಲ್ಲಿ ಮತ್ತೆ ಈಗ ಕೊರೊನಾ ಭಯ ಶುರುವಾಗಿದೆ. ಮಹಾರಾಷ್ಟ್ರದಲ್ಲಿ 19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕದಲ್ಲಿ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿರುವ ಕೆಪಿ2 ಮಹಾರಾಷ್ಟ್ರದಲ್ಲೂ ಹೆಚ್ಚು ವೇಗದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ.
- Nayana Rajeev
- Updated on: May 13, 2024
- 8:14 am
ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ
AstraZeneca withdraws COVID vaccine: ಅಸ್ಟ್ರಾಜೆನೆಕಾ ವಿಶ್ವದಾದ್ಯಂತ ಇರುವ ಔಷಧೀಯ ಮಾರುಕಟ್ಟೆಗಳಿಂದ ಕೋವಿಶೀಲ್ಡ್ ಕೋವಿಡ್ ಲಸಿಕೆಯನ್ನು ಹಿಂಪಡೆಯಲು ಮುಮದಾಗಿದೆ. ಈ ಕೋವಿಡ್ ಲಸಿಕೆಯು ಅಪಾಯಕಾರಿ ಅಡ್ಡಪರಿಣಾಮವನ್ನು ಉಂಟು ಮಾಡಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಕಂಪನಿಯು ಒಪ್ಪಿಕೊಂಡ ಬಳಿಕ ಜಾಗತಿಕವಾಗಿ ಲಸಿಕೆಯನ್ನು ಹಿಂಪಡೆದಿದೆ.
- Nayana Rajeev
- Updated on: May 8, 2024
- 9:19 am
ಕೊವಿಡ್ ಲಸಿಕೆಯಿಂದ ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆಯ್ತಾ? ನಟನಿಗೂ ಇದೆ ಅನುಮಾನ
ಎಲ್ಲ ವಿಚಾರದಲ್ಲಿಯೂ ನಟ ಶ್ರೇಯಸ್ ತಲ್ಪಡೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆದರೂ ಕೂಡ ತಮಗೆ ಹೃದಯಾಘಾತ ಆಗಿದ್ದರ ಬಗ್ಗೆ ಅವರಿಗೆ ಅನುಮಾನ ಶುರುವಾಗಿದೆ. ಕೊವಿಡ್-19 ಲಸಿಕೆಯ ಬಗ್ಗೆ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದು, ಒಂದಷ್ಟು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
- Madan Kumar
- Updated on: May 5, 2024
- 10:44 am
ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕೈಬಿಟ್ಟ ಆರೋಗ್ಯ ಇಲಾಖೆ, ಕಾರಣವೇನು?
ಆರೋಗ್ಯ ಇಲಾಖೆಯು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೊವನ್ನು ಕೈಬಿಟ್ಟಿದೆ. ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊವನ್ನು ಹಾಕಲಾಗಿತ್ತು. ಭಾರತವು ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಹೆಸರನ್ನು ಕೈಬಿಡಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
- Nayana Rajeev
- Updated on: May 2, 2024
- 9:58 am
ಕೋವಿಶೀಲ್ಡ್ ಪಡೆದ 10 ಲಕ್ಷ ಜನರಲ್ಲಿ ಏಳೆಂಟು ಮಂದಿಗೆ ಮಾತ್ರ ಬ್ಲಡ್ಕ್ಲಾಟಿಂಗ್ ರಿಸ್ಕ್: ಭಯ ನಿವಾರಿಸಲು ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ ಯತ್ನ
Covishield vaccine side effect risk too low: ಬ್ರಿಟನ್ ಮತ್ತು ಸ್ವೀಡನ್ ಮೂಲದ ಅಸ್ಟ್ರಾಜೆನೆಕಾ ಕಂಪನಿ ತಾನು ತಯಾರಿಸಿ AZ Vaxzevria ಕೋವಿಡ್ ಲಸಿಕೆ ಅಪರೂಪಕ್ಕೆ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಬೀರಬಹುದು ಎಂದು ಕೋರ್ಟ್ ವಿಚಾರಣೆ ವೇಳೆ ಮಾಹಿತಿ ನೀಡಿತ್ತು. ಆ ಲಸಿಕೆಯನ್ನೇ ಸೀರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ತಯಾರಿಸಿ ಬಿಡುಗಡೆ ಮಾಡಿತ್ತು. ಶೇ. 90ರಷ್ಟು ಭಾರತೀಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ಧಾರೆ. ಐಸಿಎಂಆರ್ನ ಮಾಜಿ ವಿಜ್ಞಾನಿಯೊಬ್ಬರು ಕೋವಿಶೀಲ್ಡ್ ವ್ಯಾಕ್ಸಿನ್ನಿಂದ ಅಡ್ಡಪರಿಣಾಮ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
- Vijaya Sarathy SN
- Updated on: May 1, 2024
- 12:57 pm
ಕೋವಿಶೀಲ್ಡ್ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಟಿಟಿಎಸ್ಗೂ ಕಾರಣವಾಗಬಹುದು
ಬ್ರಿಟಿಷ್ ಫಾರ್ಮಾ ಅಸ್ಟ್ರಾಜೆನೆಕಾ ತನ್ನ ಕೋವಿಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ಗೆ ಕಾರಣವಾಗಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
- Nayana Rajeev
- Updated on: Apr 30, 2024
- 9:12 am
Covid-19: ಉತ್ತರ ಭಾರತದಲ್ಲಿ ಮತ್ತೆ ಕೊವಿಡ್ ಆರ್ಭಟ; ಈ ರೋಗವನ್ನು ತಡೆಗಟ್ಟುವುದು ಹೇಗೆ?
2020 ಮತ್ತು 2021ರಲ್ಲಿ ಇಡೀ ಜಗತ್ತನ್ನೇ ನಡುಗಿಸಿದ್ದ ಕೊವಿಡ್-19 ಅಬ್ಬರ ಇತ್ತೀಚೆಗೆ ಕೊಂಚ ಕಡಿಮೆಯಾಗಿತ್ತು. ಕೊರೊನಾ ಲಸಿಕೆಯ ನಂತರ ಕೊವಿಡ್ ಹರಡುವಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಆದರೆ, ಇದೀಗ ಮತ್ತೆ ಉತ್ತರ ಭಾರತದ ರಾಜ್ಯಗಳಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊವಿಡ್-19 ರೋಗಲಕ್ಷಣಗಳು ಮತ್ತು ರೋಗವನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ.
- Sushma Chakre
- Updated on: Mar 7, 2024
- 5:42 pm