AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ಜಲಾಶಯಕ್ಕೆ ಬದಲೀ ಕ್ರೆಸ್ಟ್ ಗೇಟ್ ಅಳವಡಿಸುವ ಕಾರ್ಯ ಇಂದು ಸಾಯಂಕಾಲದಿಂದ ಆರಂಭ

ತುಂಗಭದ್ರಾ ಜಲಾಶಯಕ್ಕೆ ಬದಲೀ ಕ್ರೆಸ್ಟ್ ಗೇಟ್ ಅಳವಡಿಸುವ ಕಾರ್ಯ ಇಂದು ಸಾಯಂಕಾಲದಿಂದ ಆರಂಭ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 13, 2024 | 3:30 PM

ಇಂದು ಬೆಳಗ್ಗೆಯಿಂದ ಜಲಾಶಯದಿಂದ ನೀರನ್ನು ಖಾಲಿ ಮಾಡುವ ಕೆಲಸ ಆರಂಭವಾಗಿದೆ. ಟಿಬಿ ಡ್ಯಾಂನಲ್ಲಿ 103 ಟಿಎಂಸಿ ನೀರು ಸಂಗ್ರಹವಾಗಿತ್ತು ಮತ್ತು ಕ್ರೆಸ್ಟ್ ಗೇಟ್ ಗಳ ಮೂಲಕ ಸುಮಾರು 60 ಟಿಎಂಸಿ ನೀರನ್ನು ನದಿಗಳಿಗೆ ಹರಿಬಿಡಬೇಕಿದೆ. ಜಲಾಶಯದಲ್ಲಿ ಕನಿಷ್ಠ 50ಟಿಎಂಸಿ ನೀರನ್ನು ಉಳಿಸಿಕೊಳ್ಳುವಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತುಂಗಭದ್ರಾ ನಿಗಮಕ್ಕೆ ಸೂಚನೆ ನೀಡಿದ್ದಾರೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಮುರಿದು ನೀರಿನಲ್ಲಿ ಕೊಚ್ಚಿಕೊಂಡು ಹೋದ ನಂತರ ಸೃಷ್ಟಿಯಾಗಿರುವ ಎಲ್ಲ ವಿದ್ಯಮಾನಗಳನ್ನು ನಾವು ವರದಿ ಮಾಡುತ್ತಿದ್ದೇವೆ. ಡ್ಯಾಂನ ಮುರಿದು ಹೋಗಿರುವ ಕ್ರೆಸ್ಟ್ ಗೇಟ್ ಜಾಗದಲ್ಲಿ ಹೊಸದನ್ನು ಅಳವಡಿಸುವ ಕೆಲಸ ಇಂದು ಸಾಯಂಕಾಲದಿಂದ ಆರಂಭವಾಗಲಿದೆ ಮತ್ತು ಅದನ್ನು ಹೇಗೆ ಅಳವಡಿಸಲಾಗುತ್ತದೆ ಮತ್ತು ಗೇಟ್ ಗಳನ್ನು ಹೇಗೆ ಆಪರೇಟ್ ಮಾಡಲಾಗುತ್ತದೆ ಅನ್ನೋದನ್ನು ನಮ್ಮ ವರದಿಗಾರ ದ ಇಲ್ಲಿ ವಿವರಿಸಿದ್ದಾರೆ. ಚೇನ್ ಲಿಂಕ್ ಕಟ್ ಆಗಿದ್ದಕ್ಕೆ 19 ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋದ ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಚೇನನ್ನು ದೃಶ್ಯಗಳಲ್ಲಿ ನೋಡಬಹುದು, ಈ ಚೇನ್ ಗಳ ನೆರವಿನಿಂದ ಗೇಟ್ ಗಳನ್ನು ಓಪನ್ ಮತ್ತು ಮುಚ್ಚುವ ಕೆಲಸ ಮಾಡಲಾಗುತ್ತೆ. ಇನ್ನು ಹೊಸ ಗೇಟ್ ಅಳವಡಿಸುವ ಕೆಲಸವನ್ನು ಎರಡು ಸ್ಥಳೀಯ ಇಂಜಿನೀಯರಿಂಗ್ ಸಂಸ್ಥೆಗಳಿಗೆ ನೀಡಲಾಗಿದ್ದು ಕ್ರೇನ್ ಗಳ ಮೂಲಕ ಅದನ್ನು ಮಾಡಲಾಗುವುದು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಅದರೆ ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರು ಇರೋದ್ರಿಂದ ಕ್ರೇನ್ ಗಳನ್ನು ಬಳಸಿ ಮತ್ತು ಗೇಟ್ ನ 5 ಪ್ಲೇಟ್ ಗಳನ್ನು ಜೋಡಿಸುವುದು ಬೃಹತ್ ಸವಾಲಿನ ಕೆಲಸವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು