AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಗೇಟ್ ಅಳವಡಿಸುವ ಕಾರ್ಯ ಶನಿವಾರ ಮುಗಿಯಲಿದೆ: ಜಮೀರ್ ಅಹ್ಮದ್

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಗೇಟ್ ಅಳವಡಿಸುವ ಕಾರ್ಯ ಶನಿವಾರ ಮುಗಿಯಲಿದೆ: ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Aug 14, 2024 | 4:16 PM

Share

ಕಿತ್ತುಹೋಗಿರುವ ಜಲಾಶಯದ ಕ್ರೆಸ್ಟ್ ಗೇಟ್ ವೀಕ್ಷಿಸಲು ನಿನ್ನೆ ಅಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಜಮೀರ್ ಅಹ್ಮದ್ ಸಹ ಇದ್ದರು. ಸಿದ್ದರಾಮಯ್ಯ ವಾಪಸ್ಸು ಹೋಗಿದ್ದಾರೆ ಮತ್ತು ಸಚಿವ ಇಲ್ಲೇ ಉಳಿದುಕೊಂಡಿರುವಂತಿದೆ. ಸ್ಟಾಪ್ ಗೇಟ್ ಅಳವಡಿಸುವವರೆಗೆ ಕೊಪ್ಪಳದಲ್ಲೇ ಇರುವಂತೆ ಸಿಎಂ ಹೇಳಿರಬಹುದು.

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕಿತ್ತುಹೋಗಿರುವ 19 ನೇ ಕ್ರೆಸ್ಟ್ ಗೇಟ್ ಜಾಗದಲ್ಲಿ ಹೊಸ ಸ್ಟಾಪ್ ಗೇಟನ್ನು ಜೋಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ. ಇವತ್ತು ಮಧ್ಯಾಹ್ನ ಗೇಟ್ ಗೆ ಪೂಜೆ ನೆರವೇರಿಸಲಾಗಿದ್ದು ಅಳವಡಿಕೆ ಕೆಲಸ ಸಾಯಂಕಾಲ ಆರಂಭವಾಗಲಿದೆಯೆಂದು ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಜಮೀರ್, ಸ್ಟಾಪ್ ಗೇಟ್ ಜೋಡಿಸುವ ಕೆಲಸ ಇಂದು ಸಾಯಂಕಾಲ ಆರಂಭಗೊಳ್ಳಲಿದೆ ಮತ್ತು ಆಗಸ್ಟ್ 16 ಇಲ್ಲವೇ 17 ರವರೆಗೆ ಕೆಲಸ ಮುಗಿಸಿ ಕೊಡುವುದಾಗಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಇಂಜಿನೀಯರ್ ಗಳು ಹೇಳಿರುವರೆಂದು ತಿಳಿಸಿದರು. ಜಲಾಶಯದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರೋದ್ರಿಂದ ಗೇಟ್ ಜೋಡಿಸುವ ಕಾರ್ಯ ವಿಳಂಬಗೊಳ್ಳುತ್ತಿದೆ ಎಂದು ಹೇಳಿದ ಜಮೀರ್, ಜಲಾಶಯದಲ್ಲಿ ಸದ್ಯಕ್ಕೆ 93 ಟಿಎಂಸಿ ನೀರು ಇದೆ ಎಂದರು. ಕಟ್ ಆಗಿರುವ ಚೇನ್ ಲಿಂಕ್ ಅನ್ನು ದುರಸ್ತಿ ಮಾಡಬೇಕಾದರೆ ಜಲಾಶಯದಿಂದ 60 ಟಿಎಂಸಿ ನೀರನ್ನು ಹೊರಬಿಡಬೇಕಾಗುತ್ತದೆ, ಆದರೆ ಸ್ಟಾಪ್ ಗೇಟನ್ನು ಅಳವಡಿಕೆಯನ್ನು ನೀರು ಉಳಿಸಿಕೊಂಡೇ ಮಾಡಬಹುದು ಎಂದು ಜಮೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಡುವ ಕಾರ್ಯ ಆರಂಭ, ಪ್ರವಾಹದ ಭೀತಿಯಲ್ಲಿ ಜನ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.