Padahastasana: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ

International Yoga Day 2024: ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್​ 21ರಂದು ವಿಶ್ವ ಯೋಗದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.

Padahastasana: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ
|

Updated on:Jun 16, 2024 | 1:34 PM

ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗ  ದಿನ(International Yoga Day)ವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.

ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಷಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ.

ವಿಧಾನ: ಮೊದಲು ಕಾಲುಗಳನ್ನು ಹತ್ತಿರವಾಗಿಸಿ ನೇರವಾಗಿ ನಿಂತುಕೊಳ್ಳಿ, ಉಸಿರನ್ನು ಒಳತೆಗೆದುಕೊಂಡು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕೈಗಳು ನೇರವಾಗಿದ್ದು, ಕಿವಿಗೆ ತಾಗುವಂತಿರಬೇಕು.

ಉಸಿರನ್ನು ಹೊರಗೆ ಬಿಡುತ್ತಾ, ಸೊಂಟದಿಂದ ಕೆಳಗೆ ಬಾಗಿ ನಿಮ್ಮ ಕೈಗಳಿಂದ ಕಾಲನ್ನು ಮುಟ್ಟಿರಿ. ಈ ಭಂಗಿಯಲ್ಲಿ ಕಾಲನ್ನು ನೇರವಾಗಿಸಿ ತಲೆಯನ್ನು ಮೊಣಗಂಟಿನ ಸಮೀಪದವರೆಗೆ ಬಾಗಿಸಿ. ಇದೇ ಭಂಗಿಯಲ್ಲಿ ಸುಮಾರು 30-40 ಸೆಕೆಂಡುಗಳ ಕಾಲ ನಿಲ್ಲಿ, ಈ ಭಂಗಿ ಸೂರ್ಯ ನಮಸ್ಕಾರದ ಮೂರನೇ ಹಂತವೂ ಆಗಿದೆ. ಈ ಭಂಗಿಯಿಂದ ಮರಳಲು, ಉಸಿರನ್ನು ಒಳತೆಗೆದುಕೊಂಡು ಕೈಗಳನ್ನು ಸಡಿಲಗೊಳಿಸಿ ಬಳಿಕ ದೇಹವನ್ನು ಮೇಲಕ್ಕೆತ್ತಿ.
ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಈ ಆಸನಗಳನ್ನು ಮಾಡುವುದು ಸೂಕ್ತವಲ್ಲ.

ಪ್ರಯೋಜನಗಳೇನು?
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ನರವ್ಯೂಹವನ್ನು ಬಲಗೊಳಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Sun, 16 June 24

Follow us
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತಾಂಡವಾಡುತ್ತಿದೆ ಲಂಚಗುಳಿತನ
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತಾಂಡವಾಡುತ್ತಿದೆ ಲಂಚಗುಳಿತನ
ಅಂಗನವಾಡಿಗಳಲ್ಲಿ ಇನ್ಮುಂದೆ ಸರ್ಕಾರಿ ಮಾಂಟೆಸರಿ, LKG, UKG ಟೀಚಿಂಗ್
ಅಂಗನವಾಡಿಗಳಲ್ಲಿ ಇನ್ಮುಂದೆ ಸರ್ಕಾರಿ ಮಾಂಟೆಸರಿ, LKG, UKG ಟೀಚಿಂಗ್
ಲೋಕಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
ಲೋಕಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ
ಶಾಲಾಮಕ್ಕಳು ಪ್ರತಿಭಟನೆ ಮಾಡುವುದು ಯಾಕೆಂದ ಸಾರಿಗೆ ಸಚಿವಗೆ ಅರ್ಥವಾಗಬೇಕು!
ಶಾಲಾಮಕ್ಕಳು ಪ್ರತಿಭಟನೆ ಮಾಡುವುದು ಯಾಕೆಂದ ಸಾರಿಗೆ ಸಚಿವಗೆ ಅರ್ಥವಾಗಬೇಕು!