ಸಣ್ಣ ವ್ಯಾಪಾರಿಗಳಿಗೆ ನೀಡಿರುವ ತೆರಿಗೆ ನೋಟೀಸ್ಗಳನ್ನು ಕರ್ನಾಟಕ ಸರ್ಕಾರ ವಾಪಸ್ಸು ಪಡೆಯಲಿ: ಸಿಟಿ ರವಿ
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನವೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ಕಾಡದಿರದು, ಯಾಕೆಂದರೆ ಐಟಿ-ಬಿಟಿ ರಾಜಧಾನಿಯೂ ಎನಿಸಿಕೊಂಡಿರುವ ಬೆಂಗಳೂರು ಡಿಜಿಟಲ್ ಪೇಮೆಂಟ್ಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ, ಇಲ್ಲಿ ತರಕಾರಿ ಮಾರುವವ ಸಹ ಡಿಜಿಟಲ್ ಪೇಮೆಂಟ್ ಸ್ವೀಕರಿಸುತ್ತಾನೆ ಎಂದು ಎಂಎಲ್ಸಿ ಸಿಟಿ ರವಿ ಹೇಳಿದರು.
ಬೆಂಗಳೂರು, ಜುಲೈ 22: ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ತೆರಿಗೆ ನೋಟೀಸ್ ಗಳಿಂದ ಸಣ್ಣ ವ್ಯಾಪಾರಿಗಳು ಭೀತಿಗೊಳಗಾಗಿದ್ದಾರೆ, ಅವರಿಗಿರುವ ಹೆದರಿಕೆ, ಆತಂಕವನ್ನು ಮಧ್ಯವರ್ತಿಗಳು (mediators) ಎನ್ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಸಣ್ಣ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮುಚ್ಚಿ ಗಂಟು ಮೂಟೆ ಕಟ್ಟಿ ತಮ್ಮ ಊರುಗಳಿಗೆ ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಸರ್ಕಾರ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟೀಸ್ಗಳನ್ನು ಕಳಿಸುತ್ತಿದೆ, ಚಿಕ್ಕ ವ್ಯಾಪಾರಿಗಳನ್ನು ಹೀಗೆ ಗೋಳು ಹೊಯ್ದುಕೊಳ್ಳುವ ಬದಲು ಖಜಾನೆ ಖಾಲಿಯಾಗಿದೆ ಅಂತ ಸರ್ಕಾರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ, ವ್ಯಾಪಾರಿಗಳನ್ನು ಭಯದಿಂದ ಮುಕ್ತಮಾಡುವ ಏಕೈಕ ಮಾರ್ಗವೆಂದರೆ ಅವರಿಗೆ ಜಾರಿ ಮಾಡಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯುವುದು ಎಂದು ರವಿ ಹೇಳಿದರು.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಶಾಕ್, ಭಾರೀ ಮೊತ್ತಗಳ ತೆರಿಗೆ ಕಟ್ಟುವಂತೆ ನೋಟೀಸ್!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

