AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ

ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ

ಮದನ್​ ಕುಮಾರ್​
|

Updated on: Feb 25, 2026 | 5:20 PM

Share

ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜಗ್ಗೇಶ್ ಮುಂತಾದವರು ಅದರಲ್ಲಿ ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು.

ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಜಗ್ಗೇಶ್ (Jaggesh), ರಿಷಬ್ ಶೆಟ್ಟಿ ಮುಂತಾದವರು ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ‘ಇದು ನಾನು ಎಲ್ಲಿಯೂ ಹಂಚಿಕೊಳ್ಳದೇ ಇರುವ ವಿಚಾರ. ಆಗ ನಾನು ಹುಟ್ಟಿರಲಿಲ್ಲ. ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ ಅದು. ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತುಕೊಂಡರು. ಆನಂತರವೇ ನಾನು ಹುಟ್ಟಿದ್ದು. ನಾನು ಗುರುವಾರವೇ ಜನಿಸಿದ್ದು. ಏನೇ ಕಷ್ಟ ಬಂದರೂ ರಾಯರಿಂದ ಒಳ್ಳೆಯದಾಗತ್ತೆ ಅಂತ ನಮ್ಮ ತಾಯಿ ಹೇಳುತ್ತಾರೆ. ಶೂಟಿಂಗ್ ವೇಳೆ ಏನೇ ಸಮಸ್ಯೆ ಬಂದರೂ ರಾಯರನ್ನು ನೆನಪಿಸಿಕೊಂಡರೆ ಪರಿಹಾರ ಆಗುತ್ತದೆ’ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us