Rishab Shetty
ರಿಷಬ್ ಶೆಟ್ಟಿ ಕನ್ನಡದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಕನ್ನಡ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಮೊದಲು ಅವರು ನಟನಾಗಿ ಫೇಮಸ್ ಆದರು. ಆ ಬಳಿಕ ‘ರಿಕ್ಕಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ‘ಕಿರಿಕ್ ಪಾರ್ಟಿ’ (2016) ಅವರಿಗೆ ಜನಪ್ರಿಯತೆ ನೀಡಿತು. ನಂತರ ನಿರ್ದೇಶನದಲ್ಲಿ ಹೆಚ್ಚು ತೊಡಗಿಕೊಂಡರು. ನಟನಾಗಿಯೂ ಗಮನ ಸೆಳೆದರು. ‘ಕಾಂತಾರ’ (2022) ಚಿತ್ರದಿಂದ ಅವರು ಅಪಾರ ಮನ್ನಣೆ ಪಡೆದರು. ಇದರಿಂದ ಪ್ಯಾನ್ ಇಂಡಿಯಾ ಹೀರೋ ಆದರು. ಈ ಸಿನಿಮಾ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸುವುದರೊಂದಿಗೆ ಭಾರಿ ಯಶಸ್ಸನ್ನು ಗಳಿಸಿತು. ವಿಶಿಷ್ಟವಾದ ಪ್ರಾದೇಶಿಕ ನಿರೂಪಣೆಗಳೊಂದಿಗೆ ಸಿನಿಮಾ ಗೆದ್ದಿತ್ತು. ಅವರ ಸಿನಿಮಾದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಜಾನಪದ ಅಂಶವನ್ನು ತಮ್ಮ ಸಿನಿಮಾದಲ್ಲಿ ತರುತ್ತಾರೆ. ಅವರು ಪ್ರಗತಿ ಶೆಟ್ಟಿಯನ್ನು ಮದುವೆ ಆಗಿದ್ದಾರೆ
‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ’; ರಿಷಬ್ಗೆ ಅಭಯ ನೀಡಿದ ದೈವ
ರಿಬಷ ಶೆಟ್ಟಿ ಅವರು ದೈವದ ಬಗ್ಗೆ ಅಪಾರ ಭಕ್ತಿ ಹೊಂದಿದವರು. ಅವರು ಈಗ ಪಂಜುರ್ಲಿಗೆ ಹರಕೆ ಕೋಲ ನೀಡಿ ಸಂತುಷ್ಟಗೊಂಡಿದ್ದಾರೆ. ಈ ವೇಳೆ ದೈವವು ನಿನ್ನ ಪರವಾಗಿ ಇರೋದಾಗಿ ಅಭಯ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
- Rajesh Duggumane
- Updated on: Dec 5, 2025
- 8:30 am
ಪಂಜುರ್ಲಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹರಕೆ ತೀರಿಸಿದ ರಿಷಬ್ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡದವರು ಹರಕೆ ತೀರಿಸಲು ಬಂದಿದ್ದಾರೆ. ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ಪತ್ನಿ, ಮಕ್ಕಳ ಜತೆ ನೇಮೋತ್ಸವಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ಕೂಡ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಮತ್ತು ಕುಟುಂಬದವರು ಭಾಗಿ ಆಗಿದ್ದರು.
- Pruthviraj
- Updated on: Dec 4, 2025
- 9:53 pm
ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ
IMDb 2025ರ ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಶಾರುಖ್, ಸಲ್ಮಾನ್ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಬಹುತೇಕ ಹೊಸ ಮುಖಗಳಿದ್ದು, ಮೂವರು ಕನ್ನಡದ ಕಲಾವಿದರಾದ ರಶ್ಮಿಕಾ ಮಂದಣ್ಣ (6), ರುಕ್ಮಿಣಿ ವಸಂತ್ (9), ರಿಷಬ್ ಶೆಟ್ಟಿ (10) ಸ್ಥಾನ ಗಳಿಸಿದ್ದಾರೆ.
- Rajesh Duggumane
- Updated on: Dec 4, 2025
- 10:58 am
ದೈವ ಅವಮಾನಿಸಿದ ರಣವೀರ್ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ
ಗೋವಾ ಸಿನಿಮೋತ್ಸವದಲ್ಲಿ ರಣವೀರ್ ಸಿಂಗ್ ದೈವವನ್ನು ಅಸಭ್ಯವಾಗಿ ಅನುಕರಿಸಿ ವಿವಾದ ಸೃಷ್ಟಿಸಿದರು. 'ಕಾಂತಾರ'ದ ಬಗ್ಗೆ ಹೊಗಳಿದರೂ, ದೈವವನ್ನು 'ದೆವ್ವ' ಎಂದಿದ್ದಲ್ಲದೆ ಅವಮಾನ ಮಾಡಿದರು. ಇದಕ್ಕೆ ರಿಷಬ್ ಶೆಟ್ಟಿ ವೇದಿಕೆಯಲ್ಲೇ ನೇರವಾಗಿ ಹೇಳದೆ, ಸಂಜ್ಞೆ ಮೂಲಕ ರಣವೀರ್ಗೆ ಸಭ್ಯ ಉತ್ತರ ನೀಡಿದ್ದು ಈಗ ವೈರಲ್ ಆಗಿದೆ.
- Rajesh Duggumane
- Updated on: Dec 1, 2025
- 12:38 pm
ದೈವ ಅವಮಾನಿಸಿದ ರಣವೀರ್ ಸಿಂಗ್ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ
ನಟ ರಣವೀರ್ ಸಿಂಗ್ ಗೋವಾದಲ್ಲಿ ಕಾಂತಾರ ದೈವವನ್ನು 'ದೆವ್ವ' ಎಂದಿದ್ದು ವಿವಾದ ಸೃಷ್ಟಿಸಿದೆ. ರಿಷಬ್ ಶೆಟ್ಟಿಗೂ ಮುಜುಗರ ತಂದ ಈ ಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ, ರಣವೀರ್ ಹೇಳಿದ್ದ ದೃಶ್ಯವನ್ನೇ ಹಂಚಿಕೊಂಡು ಕೌಂಟರ್ ನೀಡಿದೆ ಎಂದು ಹಲವರು ಭಾವಿಸಿದ್ದಾರೆ. ಕಾಂತಾರ 'ದೈವ'ದ ಬಗ್ಗೆ ರಣವೀರ್ ತಿಳುವಳಿಕೆ ಕೊರತೆಗೆ ಟೀಕೆ ವ್ಯಕ್ತವಾಗಿದೆ.
- Rajesh Duggumane
- Updated on: Dec 1, 2025
- 7:04 am
ರಿಷಬ್ ಶೆಟ್ಟಿ ಮೊತ್ತ ಮೊದಲು ಬಣ್ಣ ಹಚ್ಚಿದ್ದೆಲ್ಲಿ? ಬಾಲ್ಯದ ಆ ದಿನಗಳ ನೆನಪಿಸಿಕೊಂಡ ಡಿವೈನ್ ಸ್ಟಾರ್
ಗೋವಾ ಚಲನಚಿತ್ರೋತ್ಸವದಲ್ಲಿ ಯಕ್ಷಗಾನದ ಬಗ್ಗೆ ರಿಷಬ್ ಶೆಟ್ಟಿ ಮಾತು: ಸಿನಿಮಾ ಕಥೆಗಳಿಗೂ ಕರಾವಳಿಯ ಕಲೆ ಪ್ರೇರಣೆ ಎಂದ ಡಿವೈನ್ ಸ್ಟಾರ್. ಯಕ್ಷಗಾನದ ಇತಿಹಾಸ, ಕರ್ನಾಟಕದ ಇತರ ಕಲೆಗಳಿಗೆ ಯಕ್ಷಗಾನದ ಕೊಡುಗೆ ಏನು ಎಂಬುದನ್ನು ನೆನಪಿಸಿದ ರಿಷಬ್ ಶೆಟ್ಟಿ, ತಾವು ಬಾಲ್ಯದಲ್ಲಿ ಮೊದಲ ಬಾರಿಗೆ ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿದ್ದನ್ನು ನೆಪಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ.
- Ganapathi Sharma
- Updated on: Nov 29, 2025
- 7:22 am
ರಿಷಬ್ ಶೆಟ್ಟಿಗೆ ಹಿರಿಯರನ್ನು ಕಂಡರೆ ಎಷ್ಟು ಗೌರವ ನೋಡಿ
ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಎಲ್ಲ ಸಾಕಷ್ಟು ಜನಪ್ರಿಯತೆ ಇದೆ. ಅವರಿಗೆ ಹಿರಿಯರನ್ನು ಕಂಡರೆ ತುಂಬಾನೇ ಗೌರವ. ಅದನ್ನು ತೋರಿಸುವ ರೀತಿಯಲ್ಲಿ ಈ ವಿಡಿಯೋ ಇದೆ. ಆ ಬಗ್ಗೆ ಇಲ್ಲಿ ಇದೆ ವಿವರ.
- Rajesh Duggumane
- Updated on: Nov 22, 2025
- 2:16 pm
ಥಿಯೇಟರ್ನಲ್ಲಿ 50 ದಿನ ಪೂರೈಸಿದ ‘ಕಾಂತಾರ: ಚಾಪ್ಟರ್ 1’; ಸಿಕ್ಕಿರೋ ಶೋಗಳೆಷ್ಟು?
'ಕಾಂತಾರ: ಚಾಪ್ಟರ್ 1' ಸಿನಿಮಾ 50 ದಿನ ಪೂರೈಸಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ 900 ಕೋಟಿ ರೂ. ಗಳಿಸಿದೆ. ಒಟಿಟಿಗೆ ಬಂದರೂ ಬೆಂಗಳೂರಿನಲ್ಲಿ ಇಂದಿಗೂ 11 ಶೋಗಳೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಪ್ರೀಕ್ವೆಲ್, ಥಿಯೇಟರ್ಗಳಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಿದೆ.
- Shreelaxmi H
- Updated on: Nov 21, 2025
- 8:08 am
‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಇದೆ ಎಂದು ಗೊತ್ತಾಗಲು ಕಾರಣ ಆಗಿದ್ದು ಆ ವ್ಯಕ್ತಿ
ಕಾಂತಾರ: ಚಾಪ್ಟರ್ 1 ಚಿತ್ರದ 'ಬ್ರಹ್ಮಕಳಶ' ಹಾಡಿನಲ್ಲಿ ಕಾಣಿಸಿದ್ದ ನೀರಿನ ಕ್ಯಾನ್ ವಿವಾದದ ಕುರಿತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ. ಗುಣಮಟ್ಟ ನಿಯಂತ್ರಣ ತಂಡದ ಲೋಪದಿಂದಾಗಿ ಕ್ಯಾನ್ ಕಾಣುವ ಶಾಟ್ ಬಳಕೆಯಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿದೆ. ಜೂನಿಯರ್ ಕಲಾವಿದರೊಬ್ಬರು ಸ್ಕ್ರೀನ್ಶಾಟ್ ಹಂಚಿಕೊಂಡಾಗ ಈ ದೋಷ ಬೆಳಕಿಗೆ ಬಂದಿತ್ತು ಎಂದು ವಿವರಿಸಿದ್ದಾರೆ.
- Rajesh Duggumane
- Updated on: Nov 5, 2025
- 10:36 am
‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ಬಿಡುಗಡೆ ಕಂಡಿದೆ. ಈಗ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕೇವಲ 30 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿದೆ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿವರ ಇಲ್ಲಿದೆ.
- Rajesh Duggumane
- Updated on: Oct 31, 2025
- 11:07 am