ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತಾಡಿದ ಜೆಡಿಎಸ್ ಸದಸ್ಯ ಟಿಎ ಸರವಣ (TA Saravana) ಮತ್ತು ಸಚಿವರಾಗಿರುವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮತ್ತು ಪ್ರಿಯಾಂಕ್ ಖರ್ಗೆ (Priyank Kharge) ನಡುವೆ ಮಾತಿನ ಚಕಮಕಿ ನಡೆಯಿತು. ಅನ್ನಭಾಗ್ಯ ಯೋಜನೆ ಅಡಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ನೀಡಬೇಕು ಅಂದಾಗ ಖರ್ಗೆ ಮತ್ತು ಜಮೀರ್ ವಾದಕ್ಕಿಳಿದರು. ಸ್ವಲ್ಪ ಸಮಯದವರೆಗೆ ಸದಸ್ಯರ ನಡುವೆ ಅರಚಾಟ ಕಿರುಚಾಟ ನಡೆದಿದ್ದರಿಂದ ಯಾರೇನು ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗಲ್ಲ. ಉಪ ಸಭಾಪತಿ ಎಂಕೆ ಪ್ರಾಣೇಶ್ ಅವರನ್ನು ಶಾಂತಗೊಳಿಸದ ಬಳಿಕ ಸರವಣ, ವಿರೋಧ ಪಕ್ಷ ಸಂವಿಧಾನದ ಅವಿಭಾಜ್ಯ ಅಂಗ, ಸರ್ಕಾರವನ್ನು ಪ್ರಶ್ನಿಸುವ ಹಕ್ಕು ವಿರೋಧಪಕ್ಷಕ್ಕಿರುತ್ತದೆ, ಸಚಿವ ಜಮೀರ್ ಅಹ್ಮದ್ ಅವರು ಸದನದಲ್ಲಿ ತಾಳ್ಮೆ ಪ್ರದರ್ಶಿಸಬೇಕು ಎಂದು ತಿವಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ