AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ploughing: 9 ಎಕರೆ ಜಮೀನು ಹರಗಿದ ಜೋಡೆತ್ತು, ಬಳಿಕ 36 ಕಿಮೀ ದೂರ ಓಡೋಡಿ ಬನಶಂಕರಿ ದೇವಿಯ ದರ್ಶನ ಪಡೆದವು!

Ploughing: 9 ಎಕರೆ ಜಮೀನು ಹರಗಿದ ಜೋಡೆತ್ತು, ಬಳಿಕ 36 ಕಿಮೀ ದೂರ ಓಡೋಡಿ ಬನಶಂಕರಿ ದೇವಿಯ ದರ್ಶನ ಪಡೆದವು!

ರವಿ ಹೆಚ್ ಮೂಕಿ, ಕಲಘಟಗಿ
| Edited By: ಸಾಧು ಶ್ರೀನಾಥ್​|

Updated on: Aug 25, 2023 | 7:24 PM

Share

ಬೆಳಗ್ಗೆ ತಂಪನೆಯ ವಾತಾವಾರಣದಲ್ಲಿ ಅಂದರೆ 5 ಗಂಟೆಗೆ ಈ ಜೋಡೆತ್ತುಗಳಿಂದ ಜಮೀನು ಹರಗಲು ಆರಂಭ ಮಾಡಿಸಲಾಯಿತು. ಮುಂದೆ ಅವು 7.30 ಗಂಟೆಗೆಲ್ಲಾ 9 ಎಕರೆ ಹರಗುವುದ ಮುಕ್ತಾಯಗೊಳಿಸಿದವು. ಅಷ್ಟೇ ಅಲ್ಲ; ಈ ವಿಶಿಷ್ಟ ಸಾಹಸದ ಬಳಿಕ ಬನಶಂಕರಿಗೆ (Goddess Banashankari) ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೂದಿನಗಡದಿಂದ 36 ಕಿ.ಮೀ. ದೂರದ ಬನಶಂಕರಿವರೆಗೂ ಜೋಡೆತ್ತುಗಳು ನಿರಂತರವಾಗಿ ಓಡಿಕೊಂಡು ಹೋಗಿದ್ದವು.

ಬಾಗಲಕೋಟೆ, ಆಗಸ್ಟ್​ 25: ಈಗ ಸಾಹಸಗಳ ಯುಗ. ರೈತ ತಾನಷ್ಟೇ ಅಲ್ಲ; ತನ್ನ ಜೀವನಸಾಥಿಗಳಾದ ಜಾನುವಾರುಗಳಿಂದಲೂ ಸಾಹಸ ಮಾಡಿಸುತ್ತಾನೆ. ಆಗಾಗ್ಗೆ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲೂ ಇಂತಹುದೇ ಸಾಹಸ ನಡೆದಿದೆ. ಜೋಡೆತ್ತುಗಳಿಂದ (Jodettu Pair of Ox) ಈ ಭರ್ಜರಿ ಸಾಹಸ ಕಂಡುಬಂದಿದ್ದು, ಅವು ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹರಗಿವೆ (Ploughing). ಅಂದರೆ ಜಮೀನು ಉತ್ತಿವೆ. ಭೀಮಪ್ಪ ಮಲ್ಲಪ್ಪ ವಾಲೀಕಾರ ಅವರಿಗೆ ಸೇರಿದ ಎತ್ತುಗಳು ಇವಾಗಿವೆ.

ಕನಿಷ್ಠ ಸಮಯದಲ್ಲಿ ಗರಿಷ್ಠ ಹೊಲ ಹರಗಿದ ಜೋಡಿ ಎತ್ತುಗಳು:

ಹೌದು ಬೆಳಗ್ಗೆ ತಂಪನೆಯ ವಾತಾವಾರಣದಲ್ಲಿ ಅಂದರೆ 5 ಗಂಟೆಗೆ ಈ ಜೋಡೆತ್ತುಗಳಿಂದ ಜಮೀನು ಹರಗಲು ಆರಂಭ ಮಾಡಿಸಲಾಯಿತು. ಮುಂದೆ ಅವು 7.30 ಗಂಟೆಗೆಲ್ಲಾ 9 ಎಕರೆ ಹರಗುವುದ ಮುಕ್ತಾಯಗೊಳಿಸಿದವು. ಅಷ್ಟೇ ಅಲ್ಲ; ಈ ವಿಶಿಷ್ಟ ಸಾಹಸದ ಬಳಿಕ ಬನಶಂಕರಿಗೆ (Goddess Banashankari) ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೂದಿನಗಡದಿಂದ 36 ಕಿ.ಮೀ. ದೂರದ ಬನಶಂಕರಿವರೆಗೂ ಜೋಡೆತ್ತುಗಳು ನಿರಂತರವಾಗಿ ಓಡಿಕೊಂಡು ಹೋಗಿದ್ದವು. ಬಳಿಕ ಮಂಗಳಗುಡ್ಡದ ಮಂಗಳಾದೇವಿಯ ದರ್ಶನವನ್ನೂ ಪಡೆದವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More