ಸಿಎಂ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಇಂದು (ಸೆಪ್ಟೆಂಬರ್ 08) ಬೆಳಗ್ಗೆಯಿಂದ ಸಿಎಂ ಬೆಂಗಳೂರಿನ ವಿವಿಧ ಕಡೆ ಸುತ್ತಾಡಿದ್ದಾರೆ. ರೈತರು, ಮಹಿಳೆಯರನ್ನು ಕಂಡು ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂದೆಲ್ಲಾ ವಿಚಾರಿಸಿದ್ದರು. ಇಷ್ಟೆಲ್ಲಾ ಓಡಾಟ ನಡೆಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದೆ. ಕೂಡಲೇ ವೈದ್ಯರನ್ನು ಕರೆಯಿಸಿ ತಕ್ಷಣ ತಪಾಸಣೆ ಮಾಡಿಸಲಾಗಿದ್ದು, ವೈದ್ಯರ ತಪಾಸಣೆ ಮತ್ತು ವಿಶ್ರಾಂತಿಯ ಬಳಿಕ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.
ಬೆಂಗಳೂರು, (ಸೆಪ್ಟೆಂಬರ್ 08): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಇಂದು (ಸೆಪ್ಟೆಂಬರ್ 08) ಬೆಳಗ್ಗೆಯಿಂದ ಸಿಎಂ ಬೆಂಗಳೂರಿನ ವಿವಿಧ ಕಡೆ ಸುತ್ತಾಡಿದ್ದಾರೆ. ರೈತರು, ಮಹಿಳೆಯರನ್ನು ಕಂಡು ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂದೆಲ್ಲಾ ವಿಚಾರಿಸಿದ್ದರು. ಇಷ್ಟೆಲ್ಲಾ ಓಡಾಟ ನಡೆಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದೆ. ಕೂಡಲೇ ವೈದ್ಯರನ್ನು ಕರೆಯಿಸಿ ತಕ್ಷಣ ತಪಾಸಣೆ ಮಾಡಿಸಲಾಗಿದ್ದು, ವೈದ್ಯರ ತಪಾಸಣೆ ಮತ್ತು ವಿಶ್ರಾಂತಿಯ ಬಳಿಕ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ. ಸದ್ಯ ಸುಧಾರಿಸಿಕೊಂಡಿರುವ ಡಿಕೆ ಶಿವಕುಮಾರ್ ವಿಧಾನಸೌಧದಿಂದ ತೆರಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 08, 2026 05:35 PM
Loading...
Unable to load recommendations.
Follow Us
