ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್: ಮತ್ತೆ ಮರುಪರಿಶೀಲನೆ, ಫಲಾನುಭವಿಗಳು ಏನ್ಮಾಡ್ಬೇಕು ಗೊತ್ತಾ?
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ತಡೆಯಲು ಹಾಗೂ ಅನರ್ಹರು ಪಡೆಯುತ್ತಿದ್ದ ಮಾಸಿಕ 2,000ರೂ. ಹಣವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಹೌದು.. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಬಯೋಮೆಟ್ರಿಕ್ ಹಾಗೂ ಮುಖಚರ್ಯೆ ದೃಢೀಕರಣದ ಮೂಲಕ ಅರ್ಜಿ ಮರುಪರಿಶೀಲನೆಗೆ ಮುಂದಾಗಿದೆ.
ಬೆಂಗಳೂರು, (ಆಗಸ್ಟ್ 30): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ (gruhalakshmi scheme) ದುರ್ಬಳಕೆ ತಡೆಯಲು ಹಾಗೂ ಅನರ್ಹರು ಪಡೆಯುತ್ತಿದ್ದ ಮಾಸಿಕ 2,000ರೂ. ಹಣವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಹೌದು.. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಬಯೋಮೆಟ್ರಿಕ್ ಹಾಗೂ ಮುಖಚರ್ಯೆ ದೃಢೀಕರಣದ ಮೂಲಕ ಅರ್ಜಿ ಮರುಪರಿಶೀಲನೆಗೆ ಮುಂದಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮೃತಪಟ್ಟವರು, ಆದಾಯ ತೆರಿಗೆ ಸಾವತಿದಾರರು ಸೇರಿದಂತೆ ಅರ್ಹರಲ್ಲದ ಅನೇಕ ಫಲಾನುಭಿಗಳ ಖಾತೆಗೆ ಈ ಯೋಜನೆತ ಹಣ ಪಾವತಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ದುರ್ಬಳಕೆ ತಡೆದಯ ಅರ್ಹ ಫಲಾನುಭವಿಗೆ ಯೋಜನೆಯ ಸವಲತ್ತಯ ತಲುಪಿಸುವ ಉದ್ದೇಶದೊಂದಿಗೆ ಅರ್ಜಿ ಮರುಪರಿಶೀಲನೆಗೆ ಮುಂದಾಗಿದೆ.

