AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ

ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on: May 07, 2025 | 4:18 PM

ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ವೃದ್ಧೆ ಹನುಮವ್ವ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ₹2000 ಹಣವನ್ನು ಬಳಸಿ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಈ ಬೋರ್‌ವೆಲ್‌ಗೆ ಚಾಲನೆ ನೀಡಿದ್ದು, ಮೂರು ಇಂಚು ನೀರು ಚಿಮ್ಮಿದೆ. ವೃದ್ಧೆಯ ಸಂತೋಷಕ್ಕೆ ಕಾರಣವಾಗಿದೆ ಈ ಬೋರ್‌ವೆಲ್.

ಕೊಪ್ಪಳ, ಮೇ 07: ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆ ಹೆಸರಿನಲ್ಲಿ ಮನೆಯ ಒಡತಿಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದೆ. ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ವೃದ್ಧೆ ಹನುಮವ್ವ ಎಂಬುವರು ಗೃಹ ಲಕ್ಷ್ಮಿ ಹಣ ಕೂಡಿಟ್ಟು, ತಮ್ಮ ಜಮೀನಿನಲ್ಲಿ ಈ ಹಣದಲ್ಲಿ ಬೋರವೆಲ್ ಕೊರೆಸಿದ್ದಾರೆ. ಬೊರವೆಲ್​ಗೆ ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದ್ದಾರೆ. ಬೋರವೆಲ್​ನಲ್ಲಿ ಮೂರು ಇಂಚಿನಷ್ಟು ನೀರು‌ ಚಿಮ್ಮಿದೆ. ವೃದ್ಧೆ ಹನುಮವ್ವ ತಳವಾರ‌ ಸಂತಸಗೊಂಡಿದ್ದಾರೆ.