Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು

ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 06, 2025 | 11:57 AM

ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಾದರೆ ಸಹಜವಾಗಿಯೇ ವನ್ಯಜೀವಿಗಳು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಲಗ್ಗೆಯಿಡುತ್ತವೆ. ಮಾನವ-ವನ್ಯಜೀವಿಗಳ ನಡುವೆ ಸಂಘರ್ಷದಂಥ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗರಹೊಳೆ ಅಭಯಾರಣ್ಯದಲ್ಲಿರುವ ಕೆರೆಕುಂಟೆಗಳಿಗೆ ನೀರನ್ನು ಟ್ಯಾಂಕರ್ ಮೂಲಕ ತುಂಬಿಸುತ್ತಿದ್ದಾರೆ. ಇದಿನ್ನೂ ಬೇಸಿಗೆಯ ಆರಂಭ ಮಾತ್ರ!

ಮೈಸೂರು, ಮಾರ್ಚ್ 6: ಈ ಸಲ ಸುರಿದಿದ್ದು ಭಾರೀ ಮಳೆ, ಬತ್ತಿದ್ದ ಜಲಾಶಯಗಳೆಲ್ಲ ತುಂಬಿ ತುಳುಕಿದವು, ಹೊಳೆಗಳಲ್ಲಿ ಪ್ರವಾಹದಂತೆ ಹರಿದ ನೀರು, ಕೆರೆಕುಂಟೆಗಳಲ್ಲಿ ಕಂಠಮಟ್ಟ ನೀರು-ಹೌದು ತಾನೇ? ಆದರೆ, ನಾಗರಹೊಳೆ ಅಭಯಾರಣ್ಯದ (Nagarahole Forest Reserve) ಸ್ಥಿತಿ ನೋಡಿ ಹೇಗಿದೆ. ನಮ್ಮ ಮೈಸೂರು ವರದಿಗಾರ ಹೇಳುವ ಪ್ರಕಾರ ಅರಣ್ಯಪ್ರದೇಶದಲ್ಲಿರುವ ಸುಮಾರು 250 ಕೆರೆಕುಂಟೆಗಳು ಬತ್ತಿಹೋಗಿರುವ ಕಾರಣ ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನೀರು ಅರಸಿಕೊಂಡು ಪ್ರಾಣಿಗಳು ಮಾನವ-ವಾಸ ಪ್ರದೇಶಗಳಿಗೆ ಹೋಗಬಾರದೆನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯು ಟ್ಯಾಂಕರ್​ಗಳ ಮೂಲಕ ಕೆರೆಕುಂಟೆಗಳನ್ನು ತುಂಬಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ

Published on: Mar 06, 2025 11:11 AM