‘ಅಂಬರೀಷ್ ಜೊತೆ ಸುಮಲತಾ ನೋಡಿದ್ರೆ ನಂಗೆ ಹೊಟ್ಟೆಕಿಚ್ಚು ಆಗ್ತಿತ್ತು’: ಮಾಲಾಶ್ರೀ

ಮಂಡ್ಯದಲ್ಲಿ ‘ಕಾಟೇರ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಬಹಳ ಗ್ರ್ಯಾಂಡ್​ ಆಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾಲಾಶ್ರೀ, ಸುಮಲತಾ ಅಂಬರೀಷ್​, ಅಭಿಷೇಕ್​ ಅಂಬರೀಷ್​ ಮುಂತಾದವರು ಭಾಗಿಯಾದರು. ವೇದಿಕೆಯಲ್ಲಿ ಮಾತನಾಡಿದ ಮಾಲಾಶ್ರೀ ಅವರು ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.

‘ಅಂಬರೀಷ್ ಜೊತೆ ಸುಮಲತಾ ನೋಡಿದ್ರೆ ನಂಗೆ ಹೊಟ್ಟೆಕಿಚ್ಚು ಆಗ್ತಿತ್ತು’: ಮಾಲಾಶ್ರೀ
|

Updated on: Dec 24, 2023 | 8:42 AM

ದರ್ಶನ್​ ನಟನೆಯ ‘ಕಾಟೇರ’ ಸಿನಿಮಾದಲ್ಲಿ ಮಾಲಾಶ್ರೀ (Malashree) ಅವರ ಪುತ್ರಿ ರಾಧನಾ ರಾಮ್​ ನಾಯಕಿ ಆಗಿದ್ದಾರೆ. ಇದು ಅವರ ಮೊದಲ ಸಿನಿಮಾ. ಡಿಸೆಂಬರ್​ 29ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಇತ್ತೀಚೆಗೆ ಮಂಡ್ಯದಲ್ಲಿ ಈ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಇವೆಂಟ್​ಗೆ ಸುಮಲತಾ ಅಂಬರೀಷ್​ (Sumalatha Ambareesh), ಅಭಿಷೇಕ್​ ಅಂಬರೀಷ್​ ಮುಂತಾದವರು ಹಾಜರಿ ಹಾಕಿದ್ದರು. ವೇದಿಕೆಯಲ್ಲಿ ನಟಿ ಮಾಲಾಶ್ರೀ ಮಾತನಾಡಿದರು. ‘ನಾನು ಸುಮಲತಾಗೆ ದೊಡ್ಡ ಅಭಿಮಾನಿ. ನಮ್ಮ ಸಿನಿಮಾದ ಶೂಟಿಂಗ್​ ಲೊಕೇಷನ್​ಗೆ ಅಂಬರೀಷ್​ ಜೊತೆ ಸುಮಲತಾ ಬಂದರೆ ನನಗೆ ಹೊಟ್ಟೆಕಿಚ್ಚು ಆಗುತ್ತಿತ್ತು. ಅಂಬರೀಷ್​ಗೆ ನಾನು ಹೀರೋಯಿನ್​ ಆಗಿದ್ದರೂ ಕೂಡ ಸುಮಲತಾ ಅವರೇ ಅಂಬರೀಷ್​ಗೆ ಸೂಪರ್​ ಜೋಡಿ’ ಎಂದರು ಮಾಲಾಶ್ರೀ. ಮೊದಲ ಸಿನಿಮಾದಲ್ಲೇ ತಮ್ಮ ಮಗಳು ದರ್ಶನ್​ ಜೊತೆ ನಟಿಸಿದ್ದಕ್ಕೆ ಮಾಲಾಶ್ರೀ ಸಂಸತ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us