ತಮ್ಮ ವ್ಯವಹಾರಗಳ ಮೇಲೆ ವ್ಯಾಮೋಹ ಇರುವವರನ್ನು ಸಂಪುಟದಲ್ಲಿ ಮುಂದುವರಿಸುವ ಅಗತ್ಯವಿಲ್ಲ: ಬಸವರಾಜು ಶಿವಗಂಗಾ
ಯುವಕರಲ್ಲಿ ಮತ್ತು ಹೊಸಬರಲ್ಲಿ ಏನಾದರೂ ಹೊಸತು ಮಾಡಬೇಕೆನ್ನುವ ಹುಮ್ಮಸ್ಸಿದೆ, ಹಳಬರನ್ನೇ ಪದೇಪದೆ ಟ್ರೈ ಮಾಡೋದಕ್ಕಿಂತ ಹೊಸಬರಿಗೊಂದು ಅವಕಾಶ ಕೋಡೋದ್ರಲ್ಲಿ ತಪ್ಪೇನೂ ಇಲ್ಲ, ಸತತವಾಗಿ ಗೆಲ್ಲುತ್ತಾ ಬಂದಾಗ್ಯೂ ಸಚಿವರಾಗದವರು ಬಹಳಷ್ಟು ಜನ ಇದ್ದಾರೆ, ಅವರಿಗೂ ಮಂತ್ರಿಯಾಗುವ ಚಾನ್ಸ್ ಸಿಗಬೇಕು, ಸಂಪುಟದಲ್ಲಿ ಹಿರಿಯರು-ಹೊಸಬರ ಮಿಶ್ರಣ ಇರಬೇಕು ಎಂದು ಬಸವರಾಜು ಹೇಳಿದರು.
ದಾವಣಗೆರೆ, ಜೂನ್ 11: ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ವಿ ಬಸವರಾಜು ನೇರನುಡಿಯ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಸಂಪುಟ ವಿಸ್ತರಣೆಯ (cabinet expansion) ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ, ಅದು ನಡೆಯಬೇಕು ಮತ್ತು ಹೊಸಬರಿಗೆ ಹಾಗೂ ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು. ಸಂಪುಟದಲ್ಲಿರುವ 8-10 ಸಚಿವರಿಗೆ ಮಂತ್ರಿಯಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ವ್ಯವಹಾರಗಳನ್ನು ನೋಡಿಕೊಂಡು ಹೋಗುವುದು ಹೆಚ್ಚು ಮುಖ್ಯವಾಗಿದೆ, ಅಂಥವರನ್ನು ಸಂಪುಟದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ, ನಿಮ್ಮ ವ್ಯಹಾರಗಳ ಮೇಲೆ ಗಮನ ಹರಿಸಿ ಅಂತ ಬಿಡುಗಡೆ ಮಾಡಬೇಕು ಎಂದು ಬಸವರಾಜು ಹೇಳಿದರು. ನೀವೂ ಸಚಿವ ಸ್ಥಾನದ ಆಕಾಂಕ್ಷಿಯೇ ಅಂತ ಕೇಳಿದಾಗ, ನಾನೇನೂ ಸನ್ಯಾಸಿ ಅಲ್ಲವಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ: ಕರ್ನಾಟಕದಲ್ಲಿ ಗರಿಗೆದರಿದ ರಾಜಕೀಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ