ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬೇಡಿಕೆ: ವರ ನೀಡಿದ ಶನೇಶ್ವರ, ವಿಡಿಯೋ ವೈರಲ್

Edited By:

Updated on: Apr 26, 2024 | 10:22 PM

ನರೇಂದ್ರ ಮೋದಿ ಈ ಬಾರಿ ಮತ್ತೊಮ್ಮೆ ಪ್ರಧಾನಿ ಆಗುವುದಾದರೆ ಬಲಗಡೆ ಪ್ರಸಾದ ಕೊಡು ಎಂದು ಭಕ್ತರೊಬ್ಬರು ಬೀರೂರು ಶನೇಶ್ವರನಿಗೆ ಬೇಡಿಕೊಂಡಿದ್ದಾರೆ. ಅದರಂತೆ ಶನೇಶ್ವರ ತುಳಸಿ, ಮಲ್ಲಿಗೆ ಹೂವಿನ ಹಾರ ಪ್ರಸಾದ ನೀಡಿದ್ದಾನೆ. ಇದೀಗ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು, (ಏಪ್ರಿಲ್ 26): ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ನಾಯಕರು ಇದೀಗ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಚಾಮರಾಜನಗರದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ನರೇಂದ್ರ ಮೋದಿ ಈ ಬಾರಿ ಮತ್ತೊಮ್ಮೆ ಪ್ರಧಾನಿ ಆಗುವುದಾದರೆ ಬಲಗಡೆ ಪ್ರಸಾದ ಕೊಡು ಎಂದು ಭಕ್ತರೊಬ್ಬರು ಬೀರೂರು ಶನೇಶ್ವರನಿಗೆ ಬೇಡಿಕೊಂಡಿದ್ದಾರೆ. ಅದರಂತೆ ಶನೇಶ್ವರ ತುಳಸಿ, ಮಲ್ಲಿಗೆ ಹೂವಿನ ಹಾರ ಪ್ರಸಾದ ನೀಡಿದ್ದಾನೆ. ಕಡೂರು ತಾಲೂಕಿನ ಬೀರೂರು ಪಟ್ಟಣದ ಶನೇಶ್ವರ ದೇವಾಲಯದಲ್ಲಿ ಘಟನೆ ನಡೆದಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಡಿಯೋ ವೈರಲ್ ಆಗಿದೆ.

Follow Us
Web contact

TV9 Kannada

Read More