Belagavi; ಅನ್ನಭಾಗ್ಯ ಯೋಜನೆ ಇವತ್ತಿನಿಂದ ಜಾರಿಯಾಗಿದೆ, ಕಾರ್ಡುದಾರರ ಖಾತೆಗೆ ಆಗಸ್ಟ್ 1 ರಿಂದ ಹಣ ಜಮಾ ಆಗುತ್ತದೆ: ಸತೀಶ್ ಜಾರಕಿಹೊಳಿ
ಹಿಡ್ಕಲ್ ಡ್ಯಾಂನಲ್ಲಿ 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇಂದು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬೆಳಗಾವಿ ಜಿಲ್ಲೆಯಲ್ಲಿ ಜನ ಕುಡಿಯುವ ನೀರಿಗಾಗಿ ಅತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು. ಹಿಡ್ಕಲ್ ಡ್ಯಾಂನಲ್ಲಿ (Hidkal Dam) 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಮತ್ತು ಡ್ಯಾಂನೊಳಗೆ ಹೊಸ ನೀರಿ ಹರಿದು ಬರೋದು ಕೂಡ ಆರಂಭವಾಗಿದೆ ಎಂದರು. ಅನ್ನಭಾಗ್ಯ ಯೋಜನೆ (Anna Bhagya Scheme) ಬಗ್ಗೆ ಮಾತಾಡಿದ ಸಚಿವ, ಯೋಜನೆ ಈ ತಿಂಗಳು ಆರಂಭವಾಗಿದೆ ಮತ್ತು ಆಗಸ್ಟ್ 1 ರಿಂದ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಈ ಮೊದಲು ಸಿಗುತ್ತಿದ್ದ 5 ಕೆಜಿ ಅಕ್ಕಿ ಯಥಾಪ್ರಕಾರ ಸಿಗಲಿದೆ ಅದಕ್ಕೇನೂ ಅಡಚಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ

ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!

ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್

ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್
