Belagavi; ಅನ್ನಭಾಗ್ಯ ಯೋಜನೆ ಇವತ್ತಿನಿಂದ ಜಾರಿಯಾಗಿದೆ, ಕಾರ್ಡುದಾರರ ಖಾತೆಗೆ ಆಗಸ್ಟ್ 1 ರಿಂದ ಹಣ ಜಮಾ ಆಗುತ್ತದೆ: ಸತೀಶ್ ಜಾರಕಿಹೊಳಿ
ಹಿಡ್ಕಲ್ ಡ್ಯಾಂನಲ್ಲಿ 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇಂದು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬೆಳಗಾವಿ ಜಿಲ್ಲೆಯಲ್ಲಿ ಜನ ಕುಡಿಯುವ ನೀರಿಗಾಗಿ ಅತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು. ಹಿಡ್ಕಲ್ ಡ್ಯಾಂನಲ್ಲಿ (Hidkal Dam) 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಮತ್ತು ಡ್ಯಾಂನೊಳಗೆ ಹೊಸ ನೀರಿ ಹರಿದು ಬರೋದು ಕೂಡ ಆರಂಭವಾಗಿದೆ ಎಂದರು. ಅನ್ನಭಾಗ್ಯ ಯೋಜನೆ (Anna Bhagya Scheme) ಬಗ್ಗೆ ಮಾತಾಡಿದ ಸಚಿವ, ಯೋಜನೆ ಈ ತಿಂಗಳು ಆರಂಭವಾಗಿದೆ ಮತ್ತು ಆಗಸ್ಟ್ 1 ರಿಂದ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಈ ಮೊದಲು ಸಿಗುತ್ತಿದ್ದ 5 ಕೆಜಿ ಅಕ್ಕಿ ಯಥಾಪ್ರಕಾರ ಸಿಗಲಿದೆ ಅದಕ್ಕೇನೂ ಅಡಚಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
