Belagavi; ಅನ್ನಭಾಗ್ಯ ಯೋಜನೆ ಇವತ್ತಿನಿಂದ ಜಾರಿಯಾಗಿದೆ, ಕಾರ್ಡುದಾರರ ಖಾತೆಗೆ ಆಗಸ್ಟ್ 1 ರಿಂದ ಹಣ ಜಮಾ ಆಗುತ್ತದೆ: ಸತೀಶ್ ಜಾರಕಿಹೊಳಿ
ಹಿಡ್ಕಲ್ ಡ್ಯಾಂನಲ್ಲಿ 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇಂದು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬೆಳಗಾವಿ ಜಿಲ್ಲೆಯಲ್ಲಿ ಜನ ಕುಡಿಯುವ ನೀರಿಗಾಗಿ ಅತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು. ಹಿಡ್ಕಲ್ ಡ್ಯಾಂನಲ್ಲಿ (Hidkal Dam) 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಮತ್ತು ಡ್ಯಾಂನೊಳಗೆ ಹೊಸ ನೀರಿ ಹರಿದು ಬರೋದು ಕೂಡ ಆರಂಭವಾಗಿದೆ ಎಂದರು. ಅನ್ನಭಾಗ್ಯ ಯೋಜನೆ (Anna Bhagya Scheme) ಬಗ್ಗೆ ಮಾತಾಡಿದ ಸಚಿವ, ಯೋಜನೆ ಈ ತಿಂಗಳು ಆರಂಭವಾಗಿದೆ ಮತ್ತು ಆಗಸ್ಟ್ 1 ರಿಂದ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಈ ಮೊದಲು ಸಿಗುತ್ತಿದ್ದ 5 ಕೆಜಿ ಅಕ್ಕಿ ಯಥಾಪ್ರಕಾರ ಸಿಗಲಿದೆ ಅದಕ್ಕೇನೂ ಅಡಚಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
