ಬೆಂಗಳೂರು: ನಗರದಲ್ಲಿ ಇಂದು ಮಧ್ಯಾಹ್ನವೂ ಜೋರಾಗಿ ಮಳೆ ಸುರಿದಿದೆ. ರಸ್ತೆಗಳು ಎಂದಿನಂತೆ ಜಲಾವೃತಗೊಂಡ ಕಾರಣ ವಾಹನ ಸವಾರರು ಮುಂದೆ ಸಾಗಲು ಪಡಬಾರದ ಕಷ್ಟಪಟ್ಟರು. ರಸ್ತೆ ಮೇಲೆ ನದಿಯಂತೆ ಹರಿಯುತ್ತಿರುವ ಈ ರಸ್ತೆಯಲ್ಲಿ ಸ್ಕೂಟರ್ ಓಡಿಸಿಕೊಂಡು ಬರುತ್ತಿರುವ ಯುವಕನೊಬ್ಬ ನೀರಲ್ಲಿ ಮುಳುಗಿದ ಗುಂಡಿ ಕಾಣದೆ ಮುಗ್ಗುರಿಸಿ ಬೀಳುತ್ತಾನೆ. ಅದೃಷ್ಟಕ್ಕೆ ರಸ್ತೆ ಪಕ್ಕದ ವ್ಯಾಪಾರಸ್ಥರು ಮತ್ತು ಜನ ಅವನ ನೆರವಿಗೆ ಧಾವಿಸುತ್ತಾರೆ. ನಗರದ ಮೋತಿನಗರದ ಆದಿ ಕಬೀರ್ ಆಶ್ರಮ ರಸ್ತೆಯ ಸ್ಥಿತಿ ಇದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರ: ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು