AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಟಿ ಶ್ರೀಧರ್​ಗೆ ಸಂಸದೆ ಸುಮಲತಾ ಅಂಬರೀಶ್​ರಿಂದ ಸಾರ್ವಜನಿಕ ತರಾಟೆ!

ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಟಿ ಶ್ರೀಧರ್​ಗೆ ಸಂಸದೆ ಸುಮಲತಾ ಅಂಬರೀಶ್​ರಿಂದ ಸಾರ್ವಜನಿಕ ತರಾಟೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 18, 2022 | 3:11 PM

ಹೆದ್ದಾರಿ ಕಳಪೆ ಕಾಮಗಾರಿಯನ್ನು ಪರಿಶೀಲಿಸಲೆಂದು ಸುಮಲತಾ ಅವರು ತೆರಳಿದಾಗ ಶ್ರೀಧರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಒಬ್ಬೇ ಒಬ್ಬ ಸಿಬ್ಬಂದಿ ಅಲ್ಲಿ ಇರಲಿಲ್ಲ.

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಯೋಜನಾ ನಿರ್ದೇಶಕ ಶ್ರೀಧರ್ ರನ್ನು (BT Sridhar) ಫೋನಲ್ಲಿ ಸಾರ್ವವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಹೆದ್ದಾರಿಯು ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎಕ್ಕುಟ್ಟಿ ಹೋಗಿದೆ. ಅದನ್ನು ಪರಿಶೀಲಿಸಲೆಂದು ಸುಮಲತಾ ಅವರು ತೆರಳಿದಾಗ ಶ್ರೀಧರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಒಬ್ಬೇ ಒಬ್ಬ ಸಿಬ್ಬಂದಿ ಅಲ್ಲಿ ಇರಲಿಲ್ಲ. ಅವರ ಬೇಜವಾಬ್ದಾರಿಯಿಂದ ವೀಪರೀತ ಕೋಪಗೊಂಡ ಸಂಸದೆ, ಶ್ರೀಧರ್​ಗೆ ಫೋನಾಯಿಸಿ ಕ್ಲಾಸ್ ತೆಗೆದುಕೊಂಡರು.