ಪುರುಷರಿಂದ ಕಿತ್ತುಕೊಂಡು ಹೆಣ್ಣುಮಕ್ಕಳಿಗೆ ಕೊಡುತ್ತಿದ್ದಾರೆ: ಬಸ್‌ ದರ ಹೆಚ್ಚಿಸಿದ್ದಕ್ಕೆ ಯದುವೀರ್ ಗರಂ

Edited By:

Updated on: Jan 02, 2025 | 9:28 PM

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಬಸ್ ಟಿಕೆಟ್​ ದರ ಏರಿಕೆ ನಿರ್ಧರಕ್ಕೆ ಸದ್ಯ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಎಲ್ಲೆಡೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಮೈಸೂರಿನಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್​​ ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಮೈಸೂರು, ಜನವರಿ 02: ಈಗಾಗಲೇ ಬೆಲೆ ಏರಿಕೆಯಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಗ್ಯಾರಂಟಿ ಎಫೆಕ್ಟ್‌ನಿಂದ ಬಸ್ (bus)​ ಪ್ರಯಾಣ ದರ ಏರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದಲಾದರೂ ಹಣ ಹೊಂದಿಸಬೇಕು. ಪುರುಷರಿಂದ ಕಿತ್ತುಕೊಂಡು ಹೆಣ್ಣುಮಕ್ಕಳಿಗೆ ಕೊಡುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ಸಂಸದ ಯದುವೀರ್ ಒಡೆಯರ್ ಗರಂ ಆದರು. ಬಸ್‌ ಪ್ರಯಾಣ ದರ ಹೆಚ್ಚಿಳ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬೆಲೆ‌ ಏರಿಕೆಯ ಬಗ್ಗೆ ನಾವು ಹೇಳಿದ್ದೆವು. ಇಂದು ಅದರ ಪರಿಣಾಮ ಜನರಿಗೆ ತಟ್ಟಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us